ಬೇಜವಾಬ್ದಾರಿ ಉದ್ಯೋಗಿಯಿಂದ ಚಿಲ್ಲರೆ ಎಡವಟ್ಟು – ವಿಶ್ವದ ಬೃಹತ್‌ ಪರಮಾಣು ಸ್ಥಾವರ ಭವಿಷ್ಯವೇ ಅತಂತ್ರ..!!

ಬೇಜವಾಬ್ದಾರಿ ಉದ್ಯೋಗಿಯಿಂದ ಚಿಲ್ಲರೆ ಎಡವಟ್ಟು – ವಿಶ್ವದ ಬೃಹತ್‌ ಪರಮಾಣು ಸ್ಥಾವರ ಭವಿಷ್ಯವೇ ಅತಂತ್ರ..!!

ನ್ಯೂಸ್ ಆ್ಯರೋ‌ : ಸುರಕ್ಷತಾ ಮಾನದಂಡಗಳನ್ನು ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ವಿಶ್ವದ ಬೃಹತ್‌ ಪರಮಾಣು ಸ್ಥಾವರ ಜಪಾನ್ ನ ಟೋಕಿಯೋ ಎಲೆಕ್ಟ್ರಿಕ್‌ ಪವರ್‌ ಕಂಪನಿ (ಟೆಪ್ಕೋ) ಕಾರ್ಯಾಚರಣೆಗೆ ಇತ್ತೀಚೆಗೆ ತಡೆ ನೀಡಲಾಗಿದ್ದು, ಇದೀಗ ಅದೇ ಸಂಸ್ಥೆಯ ಉದ್ಯೋಗಿಯೊಬ್ಬರ ನಿರ್ಲಕ್ಷ್ಯದಿಂದ ಕಂಪನಿಯ ಅಗತ್ಯ ದಾಖಲೆಗಳು ಕಳೆದುಹೋಗಿದೆ. ಇದರಿಂದ ಸಂಸ್ಥೆ ಮತ್ತಷ್ಟು ಕಾಲ ನಿರ್ಬಂಧ ಎದುರಿಸುವಂತಾಗಿದೆ.

2011ರ ಫುಕುಶಿಮಾ ದುರಂತದ ಬಳಿಕ ಜಪಾನ್‌ ಪರಮಾಣು ನಿಯಂತ್ರಣ ಪ್ರಾಧಿಕಾರವು ರಾಷ್ಟ್ರದ ಕೆಲವೇ ಕೆಲವು ಪರಮಾಣು ಸ್ಥಾವರಗಳಿಗೆ ಮಾತ್ರ ಕಾರ್ಯಾಚರಣೆ ಅನುಮತಿ ನೀಡಿದೆ.

ಸುರಕ್ಷತೆ ವಿಚಾರ

33 ಸ್ಥಾವರ ಕಾರ್ಯಾಚರಣೆ ಮರು ಆರಂಭಗೊಳಿಸಲು ಅನುಮತಿಗಾಗಿ ಕಾಯುತ್ತಿದ್ದು, ಈ ಪೈಕಿ ಟೆಪ್ಕೋ ಕೂಡ ಸೇರಿದೆ. ಆದರೆ ಸುರಕ್ಷತೆ ವಿಚಾರದಲ್ಲಿ ಅಗತ್ಯ ಮಾನದಂಡ ಪೂರೈಸದ ಹಿನ್ನೆಲೆ ಕಳೆದ ವಾರವಷ್ಟೇ ಪ್ರಾಧಿಕಾರ ಟೆಪ್ಕೋ ಕಾರ್ಯಾಚರಣೆಗೆ ತಡೆ ನೀಡಿತ್ತು.

ಮಾನದಂಡಗಳನ್ನು ಪೂರೈಸುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಇರುವಂಥ ದಾಖಲೆಗಳನ್ನು ಪ್ರಸ್ತುತಪಡಿಸಲು ಸಂಸ್ಥೆ ಕಂಪನಿಯ ಉದ್ಯೋಗಿಯೊಬ್ಬರಿಗೆ ದಾಖಲೆಗಳನ್ನು ತರುವಂತೆ ಸೂಚಿಸಿತ್ತು. ಆದರೆ ಉದ್ಯೋಗಿ ದಾಖಲೆಗಳನ್ನು ಕಳೆದು ಹಾಕಿದ್ದಾರೆ. ಈಗ ದಾಖಲೆಗಳ ಕೆಲವೇ ಪುಟಗಳು ಸಿಕ್ಕಿದ್ದು, ಇನ್ನೂ 38 ಪುಟಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಹೀಗಾಗಿ ಟೆಪ್ಕೋ ಕಾರ್ಯಾಚರಣೆ ವಿಳಂಬವಾಗಿದೆ.

Related post

ಮಲಗುವ ವಿಚಾರಕ್ಕೆ ಮಗಳಿಗೆ 25 ಬಾರಿ ಚೂರಿಯಿಂದ ಇರಿದು ಕೊಂದ ಅಪ್ಪ – ಸಿಸಿಟಿವಿಯಲ್ಲಿ ಘೋರ ಕೃತ್ಯ ಸೆರೆ, ವಿಡಿಯೋ ವೈರಲ್…!!

ಮಲಗುವ ವಿಚಾರಕ್ಕೆ ಮಗಳಿಗೆ 25 ಬಾರಿ ಚೂರಿಯಿಂದ ಇರಿದು ಕೊಂದ ಅಪ್ಪ…

ನ್ಯೂಸ್ ಆ್ಯರೋ : ಮಲಗುವ ವಿಚಾರಕ್ಕೆ ಉಂಟಾದ ಜಗಳದ ಹಿನ್ನೆಲೆಯಲ್ಲಿ ಸೂರತ್‌ನ ವ್ಯಕ್ತಿಯೊಬ್ಬ ತನ್ನ ಮಗಳಿಗೆ 25 ಬಾರಿ ಇರಿದು ಕೊಂದಿರುವ ಘಟನೆ ನಡೆದಿದೆ. ಇಡೀ ಕೃತ್ಯ ಸಿಸಿಟಿವಿಯಲ್ಲಿ…
ಕೊರಗಜ್ಜ ಮೂಲಸ್ಥಾನ ಕುತ್ತಾರಿಗೆ ಭೇಟಿ ನೀಡಿದ ರಚಿತಾ ರಾಮ್ – ಕೊರಗಜ್ಜನ ಕಾರಣಿಕದಿಂದಾಗಿಯೇ ಇಲ್ಲಿಗೆ ಬಂದೆ ಎಂದ ಗುಳಿಕೆನ್ನೆ ಬೆಡಗಿ..

ಕೊರಗಜ್ಜ ಮೂಲಸ್ಥಾನ ಕುತ್ತಾರಿಗೆ ಭೇಟಿ ನೀಡಿದ ರಚಿತಾ ರಾಮ್ – ಕೊರಗಜ್ಜನ…

ನ್ಯೂಸ್ ಆ್ಯರೋ : ಸ್ಯಾಂಡಲ್ ವುಡ್ ಬೆಡಗಿ, ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಅವರು ಬುಧವಾರ ಮಂಗಳೂರು ಸಮೀಪದ ಕುತ್ತಾರು ದೆಕ್ಕಾಡಿನ ಕೊರಗಜ್ಜ ದೈವದ ಆದಿ ಸ್ಥಳಕ್ಕೆ ಭೇಟಿ…
ರಾಷ್ಟ್ರ ಮಟ್ಟದ ವಾಲಿಬಾಲ್ ಆಟಗಾರ್ತಿ ಹೃದಯಾಘಾತದಿಂದ ನಿಧನ – SDM ಕಾಲೇಜಿನ ಹಳೆವಿದ್ಯಾರ್ಥಿ, ಪಡಂಗಡಿಯ ಸಾಲಿಯತ್ ಇನ್ನಿಲ್ಲ

ರಾಷ್ಟ್ರ ಮಟ್ಟದ ವಾಲಿಬಾಲ್ ಆಟಗಾರ್ತಿ ಹೃದಯಾಘಾತದಿಂದ ನಿಧನ – SDM ಕಾಲೇಜಿನ…

ನ್ಯೂಸ್ ಆ್ಯರೋ : ರಾಷ್ಟ್ರ ಮಟ್ಟದ ಪ್ರತಿಭಾನ್ವಿತ ವಾಲಿಬಾಲ್ ಆಟಗಾರ್ತಿ, ಉಜಿರೆ ಎಸ್.ಡಿ.ಎಂ. ಕಾಲೇಜಿನ ಹಳೇ ವಿದ್ಯಾರ್ಥಿನಿ ಸಾಲಿಯತ್ (24) ಹೃದಯಾಘಾತದಿಂದ ಇಂದು ಮೃತಪಟ್ಟಿದ್ದಾರೆ. ಬೆಳ್ತಂಗಡಿ ತಾಲೂಕಿನ ಪಡಂಗಡಿ…

Leave a Reply

Your email address will not be published. Required fields are marked *