ಕರೊನಾ ಸೃಷ್ಟಿಕರ್ತ ಚೀನಾದಲ್ಲಿ ಕರೊನಾ ಸೋಂಕು ದಿಢೀರ್ ಹೆಚ್ಚಳ – ಸ್ಮಶಾನದಲ್ಲಿ ಹೆಚ್ಚುತ್ತಿದೆ ಶವಗಳ ಸಂಖ್ಯೆ

ಕರೊನಾ ಸೃಷ್ಟಿಕರ್ತ ಚೀನಾದಲ್ಲಿ ಕರೊನಾ ಸೋಂಕು ದಿಢೀರ್ ಹೆಚ್ಚಳ – ಸ್ಮಶಾನದಲ್ಲಿ ಹೆಚ್ಚುತ್ತಿದೆ ಶವಗಳ ಸಂಖ್ಯೆ

ನ್ಯೂಸ್ ಆ್ಯರೋ : ಕರೊನಾ ಸೃಷ್ಟಿಸಿದ ದೇಶ ಎಂಬ ಕುಖ್ಯಾತಿಯ ಚೀನಾ ಸಂಕಷ್ಟಕ್ಕೆ ಸಿಲುಕಿದೆ.‌ ಕರೊನಾ ವೈರಸ್​ ನಿರ್ಬಂಧಗಳನ್ನು ಸಂಪೂರ್ಣ ಸಡಿಲಗೊಳಿಸಿದ ಬೆನ್ನಲ್ಲೇ ಕೋವಿಡ್​-19 ತವರು ಚೀನಾದಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಮರಣ ಮೃದಂಗ ಬಾರಿಸುತ್ತಿದೆ. ಚೀನಾ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದಾಗಿ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಆರೋಗ್ಯ ಅರ್ಥಶಾಸ್ತ್ರಜ್ಞ ಎರಿಕ್ ಫೀಗಲ್ ಡಿಂಗ್ ಎಂಬುವರು ತಿಳಿಸಿದ್ದಾರೆ.

ಮುಂದಿನ 90 ದಿನಗಳಲ್ಲಿ ಚೀನಾದ ಶೇ. 60 ಕ್ಕಿಂತ ಹೆಚ್ಚು ಮತ್ತು ಭೂಮಿಯ ಜನಸಂಖ್ಯೆಯ ಶೇ. 10 ಪ್ರತಿಶತದಷ್ಟು ಜನರು ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಅಂದಾಜಿಸಿದ್ದಾರೆ ಮತ್ತು ಲಕ್ಷಾಂತರ ಜನರು ಸಾವನ್ನಪ್ಪುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ.

ಚೀನಾ ರಾಜ್ಯಧಾನಿ ಬೀಜಿಂಗ್‌ಲ್ಲಿ ಕೋವಿಡ್ -19 ರೋಗಿಗಳಿಗೆ ಗೊತ್ತುಪಡಿಸಿದ ಸ್ಮಶಾನವು ಇತ್ತೀಚಿಗೆ ಮೃತದೇಹಗಳಿಂದ ತುಂಬಿದೆ. ವೈರಸ್​ ಚೀನಾದ ರಾಜಧಾನಿಯ ಮೂಲಕ ವ್ಯಾಪಿಸುತ್ತಿದೆ. ದೇಶದಲ್ಲಿ ಕರೊನಾ ನಿರ್ಬಂಧಗಳ ಹಠಾತ್ ಸಡಿಲಿಕೆಯಿಂದ ಕರೊನಾ ಸ್ಫೋಟವಾಗಿದ್ದು, ಮತ್ತೊಮ್ಮೆ ಮನುಷ್ಯರು ಇದರ ದುಷ್ಪರಿಣಾಮ ಎದುರಿಸುವ ಸಾಧ್ಯತೆ ದಟ್ಟವಾಗಿದೆ.

ಸ್ಮಶಾನಕ್ಕೆ ಪ್ರತಿ ದಿನ ಸುಮಾರು 200 ದೇಹಗಳು ಬರುತ್ತಿವೆ ಎಂದು ಡೊಂಗ್‌ಜಿಯಾವೊ ಸ್ಮಶಾನದ ಮಹಿಳೆಯೊಬ್ಬರು ಅಂದಾಜಿಸಿದ್ದಾರೆ. ಸಾಮಾನ್ಯ ದಿನದಲ್ಲಿ 30 ಅಥವಾ 40 ದೇಹಗಳು ಬರುತ್ತವೆ. ಆದರೆ, ಸ್ಮಶಾನದಲ್ಲಿ ಸಿಬ್ಬಂದಿಗೆ ಕೆಲಸದ ಹೊರೆ ಹೆಚ್ಚಾಗಿದೆ ಎಂದು ತಿಳಿಸಿದ್ದು, ಮತ್ತೊಮ್ಮೆ ಕರೊನಾ ಆತಂಕ ಸೃಷ್ಟಿಯಾಗಿದೆ.

Related post

ಮಲಗುವ ವಿಚಾರಕ್ಕೆ ಮಗಳಿಗೆ 25 ಬಾರಿ ಚೂರಿಯಿಂದ ಇರಿದು ಕೊಂದ ಅಪ್ಪ – ಸಿಸಿಟಿವಿಯಲ್ಲಿ ಘೋರ ಕೃತ್ಯ ಸೆರೆ, ವಿಡಿಯೋ ವೈರಲ್…!!

ಮಲಗುವ ವಿಚಾರಕ್ಕೆ ಮಗಳಿಗೆ 25 ಬಾರಿ ಚೂರಿಯಿಂದ ಇರಿದು ಕೊಂದ ಅಪ್ಪ…

ನ್ಯೂಸ್ ಆ್ಯರೋ : ಮಲಗುವ ವಿಚಾರಕ್ಕೆ ಉಂಟಾದ ಜಗಳದ ಹಿನ್ನೆಲೆಯಲ್ಲಿ ಸೂರತ್‌ನ ವ್ಯಕ್ತಿಯೊಬ್ಬ ತನ್ನ ಮಗಳಿಗೆ 25 ಬಾರಿ ಇರಿದು ಕೊಂದಿರುವ ಘಟನೆ ನಡೆದಿದೆ. ಇಡೀ ಕೃತ್ಯ ಸಿಸಿಟಿವಿಯಲ್ಲಿ…
ಕೊರಗಜ್ಜ ಮೂಲಸ್ಥಾನ ಕುತ್ತಾರಿಗೆ ಭೇಟಿ ನೀಡಿದ ರಚಿತಾ ರಾಮ್ – ಕೊರಗಜ್ಜನ ಕಾರಣಿಕದಿಂದಾಗಿಯೇ ಇಲ್ಲಿಗೆ ಬಂದೆ ಎಂದ ಗುಳಿಕೆನ್ನೆ ಬೆಡಗಿ..

ಕೊರಗಜ್ಜ ಮೂಲಸ್ಥಾನ ಕುತ್ತಾರಿಗೆ ಭೇಟಿ ನೀಡಿದ ರಚಿತಾ ರಾಮ್ – ಕೊರಗಜ್ಜನ…

ನ್ಯೂಸ್ ಆ್ಯರೋ : ಸ್ಯಾಂಡಲ್ ವುಡ್ ಬೆಡಗಿ, ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಅವರು ಬುಧವಾರ ಮಂಗಳೂರು ಸಮೀಪದ ಕುತ್ತಾರು ದೆಕ್ಕಾಡಿನ ಕೊರಗಜ್ಜ ದೈವದ ಆದಿ ಸ್ಥಳಕ್ಕೆ ಭೇಟಿ…
ರಾಷ್ಟ್ರ ಮಟ್ಟದ ವಾಲಿಬಾಲ್ ಆಟಗಾರ್ತಿ ಹೃದಯಾಘಾತದಿಂದ ನಿಧನ – SDM ಕಾಲೇಜಿನ ಹಳೆವಿದ್ಯಾರ್ಥಿ, ಪಡಂಗಡಿಯ ಸಾಲಿಯತ್ ಇನ್ನಿಲ್ಲ

ರಾಷ್ಟ್ರ ಮಟ್ಟದ ವಾಲಿಬಾಲ್ ಆಟಗಾರ್ತಿ ಹೃದಯಾಘಾತದಿಂದ ನಿಧನ – SDM ಕಾಲೇಜಿನ…

ನ್ಯೂಸ್ ಆ್ಯರೋ : ರಾಷ್ಟ್ರ ಮಟ್ಟದ ಪ್ರತಿಭಾನ್ವಿತ ವಾಲಿಬಾಲ್ ಆಟಗಾರ್ತಿ, ಉಜಿರೆ ಎಸ್.ಡಿ.ಎಂ. ಕಾಲೇಜಿನ ಹಳೇ ವಿದ್ಯಾರ್ಥಿನಿ ಸಾಲಿಯತ್ (24) ಹೃದಯಾಘಾತದಿಂದ ಇಂದು ಮೃತಪಟ್ಟಿದ್ದಾರೆ. ಬೆಳ್ತಂಗಡಿ ತಾಲೂಕಿನ ಪಡಂಗಡಿ…

Leave a Reply

Your email address will not be published. Required fields are marked *