ಮೆಕ್ಸಿಕೊದಲ್ಲಿ ಏಲಿಯನ್ಸ್ ಗಳ ಪಳೆಯುಳಿಕೆ ಪ್ರದರ್ಶನ – ಏನಿದು ಕೌತುಕದ ಸುದ್ದಿ?

ಮೆಕ್ಸಿಕೊದಲ್ಲಿ ಏಲಿಯನ್ಸ್ ಗಳ ಪಳೆಯುಳಿಕೆ ಪ್ರದರ್ಶನ – ಏನಿದು ಕೌತುಕದ ಸುದ್ದಿ?

ನ್ಯೂಸ್ ಆ್ಯರೋ : ಅನ್ಯಗ್ರಹಗಳಲ್ಲಿ ಮನುಷ್ಯನನ್ನು ಹೋಲುವ ಜೀವ ಇದೆಯೇ ಎನ್ನುವ ಕುರಿತು ಸಂಶೋಧನೆಗಳು ಇನ್ನು ನಡೆಯುತ್ತಲೇ ಇದೆ. ಈ ನಡುವೆ ಮೆಕ್ಸಿಕೋ ಸಂಸತ್ ಈಗ ವಿಶ್ವದ ಗಮನ ಸೆಳೆದಿದೆ.

ಮೆಕ್ಸಿಕನ್ ಸಂಸತ್ ನಲ್ಲಿ ವಿಚಿತ್ರ ಜೀವಿಯ ಮಮ್ಮಿ ರೂಪದ ಪಳೆಯುಳಿಕೆಗಳನ್ನು ಪ್ರದರ್ಶಿಸಲಾಗಿದೆ.

ಸುಮಾರು ಒಂದು ಸಾವಿರ ವರ್ಷಗಳಷ್ಟು ಹಳೆಯದು ಎಂದು ಅಂದಾಜಿಸಲಾಗಿರುವ ಈ ಜೀವಿಗಳ ಪಳೆಯುಳಿಕೆಗಳನ್ನು ಗಾಜಿನ ಡಬ್ಬಿಯಲ್ಲಿ ಮೆಕ್ಸಿಕೋ ಸರ್ಕಾರದ ನಾಯಕರ ಮುಂದೆ ಪ್ರದರ್ಶಿಸಲಾಯಿತು.

ಪತ್ರಕರ್ತೆ ಹಾಗೂ ಯೂಫಾಲಾಜಿಸ್ಟ್ ಜೈಮಿ ಮುಸ್ಸಾನ್ ಈ ಪಳೆಯುಳಿಕೆಗಳನ್ನು ಪ್ರದರ್ಶಿಸಿದರು.

ಈ ಏಲಿಯನ್ ರೂಪದ ಪಳೆಯುಳಿಕೆಗಳು ಕುಸ್ಕೋ ಮತ್ತು ಪೇರು ಪ್ರದೇಶದಲ್ಲಿ ದೊರೆತಿದ್ದು, ಇವುಗಳ ಡಿಎನ್ಎ ಪರೀಕ್ಷೆಯನ್ನೂ ನಡೆಸಲಾಗಿದೆ. ಮೆಕ್ಸಿಕೋ ಆಟೊನೊಮಸ್ ಯುನಿವರ್ಸಿಟಿ ವಿಜ್ಞಾನಿಗಳು ಈ ಪರೀಕ್ಷೆ ನಡೆಸಿ, ಈ ಜೀವಿ ನಮ್ಮ ಭೂಮಿಯ ವಿಕಾಸ ಸಿದ್ದಾಂತದ ಭಾಗವಲ್ಲ. ಇದು ಮಾನವರ ಪ್ರಭೇದಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇವುಗಳ ಡಿಎನ್ಎ ಯನ್ನು ಬೇರೆಬೇರೆ ಡಿಎನ್ಎ ಗಳೊಂದಿಗೆ ಹೋಲಿಸಲಾಯಿತು. ಶೇ. 30ರಷ್ಟು ಡಿಎನ್ಎ ಯಾವುದೇ ಜೀವಿಯೊಂದಿಗೆ ಹೋಲಿಕೆಯೇ ಆಗುತ್ತಿಲ್ಲ ಎಂದು ಮುಸ್ಸಾನ್ ತಿಳಿಸಿದ್ದಾರೆ.

ಪಳೆಯುಳಿಕೆಯಾಗಿರುವ ಈ ವಿಚಿತ್ರ ಜೀವಿಗಳ ದೇಹಗಳು ಆಲ್ಗೆ ಅಂದರೆ ಪಾಚಿಯ ಗಣಿಗಳ ಬಳಿ ಸಿಕ್ಕಿದೆ ಎಂದು ಮಾಹಿತಿ ನೀಡಿರುವ ವಿಜ್ಞಾನಿಗಳು ಈ ಕುರಿತು ಹೆಚ್ಚಿನ ಅಧ್ಯಯನ ನಡೆಸುವುದಾಗಿ ತಿಳಿಸಿದ್ದಾರೆ.

Related post

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು ರದ್ದು, ಹೊಸ ಟಿಸಿಎಸ್ ನಿಯಮ ಜಾರಿ

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು…

ನ್ಯೂಸ್‌ ಆ್ಯರೋ : ತಿಂಗಳಿಗೊಮ್ಮೆ ಹಣಕಾಸಿನ ವ್ಯವಹಾರಗಳ ನಿಯಮಗಳಲ್ಲಿ ಬದಲಾವಣೆ ಆಗುವುದು ಸಹಜ ಪ್ರಕ್ರಿಯೆ. ಇದೀಗ ಅಕ್ಟೋಬರ್‌ ತಿಂಗಳು ಪ್ರಾರಂಭಕ್ಕೆ ಕೆಲ ದಿನವಿರುವಾಗಲೇ ಹಣಕಾಸಿಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ…
ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!! – ಕೋಟ್ಯಾಂತರ ರೂಪಾಯಿ ಒಡೆಯ ಈ ತಾತ ಮಾಡೋದೇನು?

ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!!…

ನ್ಯೂಸ್ ಆ್ಯರೋ : ಎಷ್ಟು ದುಡಿದರೂ ವರ್ಷಕ್ಕೆ 5- 6 ಲಕ್ಷ ಸಂಪಾದಿಸೋದೇ ಕಷ್ಟ ಎನ್ನುವವರ ಮಧ್ಯೆ ಏನೂ ಕೆಲಸವಿಲ್ಲದ ವೃದ್ಧರೊಬ್ಬರು 10 ಕೋಟಿ ರೂ. ಆದಾಯ ಗಳಿಸಿದ್ದಾರೆ.…
ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ ಮೇಲೆ ಕಾಳಜಿ ಇರುವವರು ಈ ವರದಿ ಓದಿ..

ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ…

ನ್ಯೂಸ್ ಆ್ಯರೋ : ಕರಿಬೇವಿನ ಎಲೆಗಳನ್ನು ಭಾರತೀಯ ಅಡುಗೆಮನೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅದರಲ್ಲೂ ದಕ್ಷಿಣ ಭಾರತದ ಬಹುತೇಕ ಖಾದ್ಯಗಳಲ್ಲಿ ಕರಿಬೇವು ಮುಖ್ಯ. ಕರಿಬೇವಿನ ಎಲೆಗಳು ಯಾವುದೇ ಆಹಾರದ ರುಚಿಯನ್ನು…

Leave a Reply

Your email address will not be published. Required fields are marked *