ಟೊಮ್ಯಾಟೋ ರಕ್ಷಣೆಗೆ ಬೌನ್ಸರ್ ನೇಮಿಸಿದ್ದ ಅಂಗಡಿ ಮಾಲಕನ ಬಂಧನ – ಘಟನೆಗೆ ಕಾರಣವೇನು ಗೊತ್ತಾ?
- ರಾಷ್ಟ್ರೀಯ ಸುದ್ದಿ
- July 12, 2023
- No Comment
- 492
ನ್ಯೂಸ್ ಆ್ಯರೋ : ದೇಶದಲ್ಲಿ ಟೊಮ್ಯಾಟೋ ಬೆಲೆ ಗಗನಕ್ಕೇರಿದೆ. ಕೆಲವೆಡೆ ಇದರ ದರ ದ್ವಿಶತಕವನ್ನೂ ದಾಟಿ ಮುನ್ನುಗ್ಗುತ್ತಿದೆ. ಈ ಮಧ್ಯೆ ಟೊಮ್ಯಾಟೋ ಕಳವು ಪ್ರಕರಣವೂ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಟೊಮ್ಯಾಟೋ ರಕ್ಷಣೆಗೆಂದೇ ವಾರಣಾಸಿಯ ತರಕಾರಿ ವ್ಯಾಪಾರಿಯೊಬ್ಬರು 2 ಬೌನ್ಸರ್ ಗಳನ್ನು ನೇಮಿಸಿದ್ದರು. ಇದೀಗ ಆತ ಮತ್ತು ಆತನ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.
ಕಾರಣವೇನು?
ನಾರಾಯಣ್ ಯಾದವ್ ಮತ್ತು ಅವರ ಪುತ್ರ ವಿಕಾಸ್ ಯಾದವ್ ನನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ಯ ಸರಕಾರಕ್ಕೆ ಕೆಟ್ಟ ಹೆಸರು ತರಲೆಂದು ಟೊಮ್ಯಾಟೋ ಅಂಗಡಿ ಮಾಲಕ ಅಜಯ್ ಫೌಜಿ 2 ಬೌನ್ಸರ್ ಗಳನ್ನು ನೇಮಿಸಿಕೊಂಡಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದ.
ಅಜಯ್ ಫೌಜಿ ಸಮಾಜವಾದಿ ಪಕ್ಷದ ನಾಯಕನಾಗಿದ್ದು, ಸರಕಾರಕ್ಕೆ ಕೆಟ್ಟ ಹೆಸರು ತರಲೆಂದೇ ಬೌನ್ಸರ್ ಗಳನ್ನು ನೇಮಿಸಿರುವುದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ.
ಇದೇ ಕಾರಣಕ್ಕೆ ಫೌಜಿ ಹೆಸರಿನಲ್ಲಿ ಗಲಭೆಗೆ ಪ್ರಚೋದನೆ ಎಂಬ ಕಾರಣದಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.