ಶಾರುಖ್ ಖಾನ್ ಬಂಗಲೆಯ ಕಾಂಪೌಂಡ್ ಹಾರಿ 8 ಗಂಟೆ ಅಡಗಿ ಕೂತಿದ್ದ ಫ್ಯಾನ್ಸ್ – ಪೋಲಿಸರಿಗೆ ನೀಡಿದ ದೂರಲ್ಲಿ ಏನಿದೆ?

ಶಾರುಖ್ ಖಾನ್ ಬಂಗಲೆಯ ಕಾಂಪೌಂಡ್ ಹಾರಿ 8 ಗಂಟೆ ಅಡಗಿ ಕೂತಿದ್ದ ಫ್ಯಾನ್ಸ್ – ಪೋಲಿಸರಿಗೆ ನೀಡಿದ ದೂರಲ್ಲಿ ಏನಿದೆ?

ನ್ಯೂಸ್‌ ಆ್ಯರೋ : ‘ಪಠಾಣ್‌’ ಚಿತ್ರದ ಯಶಸ್ಸಿನ ನಂತರ ಶಾರುಖ್ ಖಾನ್ ಅವರಿಗೆ ಅಭಿಮಾನಿಗಳ ಕಿರಿಕಿರಿ ಜಾಸ್ತಿಯಾಗಿದೆ. ಅವರನ್ನು ಹುಡುಕಿಕೊಂಡು ಮನೆಯ ಆವರಣಕ್ಕೆ ಅಭಿಮಾನಿಗಳು ಬರುತ್ತಿದ್ದು, ಅವರನ್ನು ತಡೆಯುವುದೇ ದೊಡ್ಡ ಸಾಹಸವಾಗಿದೆ.

ಕಿಂಗ್ ಖಾನ್ ಅನ್ನು ಕಣ್ತುಂಬಿಕೊಳ್ಳಬೇಕು ಅಂತಲೇ ಮುಂಬೈನಲ್ಲಿರುವ ಶಾರುಖ್ ಬಂಗಲೆಯಲ್ಲಿ ಇಬ್ಬರು ಅಭಿಮಾನಿಗಳು ಅಡಗಿ ಕೂತಿದ್ದರು. ಅವರು ಕಾಂಪೌಂಡ್ ಹಾರಿ, ಒಳನುಗ್ಗಿ ಸುಮಾರು 8 ಗಂಟೆಗಳ ಕಾಲ ಅಡಗಿ ಕೂತಿದ್ದರು. ಕಳೆದ ವಾರ ನಡೆದ ಈ ಘಟನೆಯ ಸಂಬಂಧ ಮುಂಬೈ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಗುಜರಾತಿನಿಂದ ಬಂದಿದ್ದ ಪಠಾಣ್ ಸಾಹಿಲ್ ಖಾನ್ ಹಾಗೂ ರಾಮ್ ಶರಾಫ್ ಕುಶ್‌ವಾಹ ಎಂಬ ಇಬ್ಬರು ಅಭಿಮಾನಿಗಳನ್ನು ಬಂಧಿಸಲಾಗಿದೆ. ಇವರಿಬ್ಬರೂ ಶಾರುಖ್ ಖಾನ್ ಅನ್ನು ಭೇಟಿ ಮಾಡಲೆಂದು ಮುಂಬೈಗೆ ಬಂದಿದ್ದರು. ಈ ವೇಳೆ ಶಾರುಖ್ ಖಾನ್ ಮನೆಯ ಮೇಕಪ್‌ ರೂಮ್‌ನಲ್ಲಿ 8 ಗಂಟೆಗಳ ಕಾಲ ಅಡಗಿ ಕೂತಿದ್ದರು ಎಂದು ಪೊಲೀಸ್‌ ಮೂಲ ತಿಳಿಸಿವೆ.

ಪಠಾಣ್ ಸಾಹಿಲ್ ಖಾನ್ ಹಾಗೂ ರಾಮ್ ಶರಾಫ್ ಕುಶ್‌ವಾಹ ಎಂಬ ಇಬ್ಬರು ಅಭಿಮಾನಿಗಳ ಮೇಲೆ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಶಾರುಖ್ ಖಾನ್ ಬಂಗಲೆಯಿಂದ ಅವರನ್ನು ಭೇಟಿ ಮಾಡಲೆಂದು ಬಂದಿದ್ದ ಇಬ್ಬರು ಅಭಿಮಾನಿಗಳನ್ನು ಬಂಧಿಸಲಾಗಿದೆ. ಅವರು ಬೆಳಗ್ಗೆ 3 ಗಂಟೆಗೆ ಮನೆಯೊಳಗೆ ಪ್ರವೇಶ ಮಾಡಿದ್ದರು. ಬೆಳಗ್ಗೆ 10.30ರ ಸುಮಾರಿಗೆ ಬಂಧಿಸಲಾಯಿತು ಎಂದು ಎಎನ್‌ಐ ವರದಿ ಮಾಡಿದೆ.

ಶಾರುಖ್ ಖಾನ್ ಬಂಗಲೆಯ ಮೂರನೇ ಮಹಡಿಯಲ್ಲಿ ಮೇಕಪ್ ರೂಮ್ ಇದ್ದು,ಅಲ್ಲಿ ಅಭಿಮಾನಿಗಳು ಅಡಗಿ ಕೂತಿದ್ದರು. ಇವರನ್ನು ಕಂಡು ಕಿಂಗ್ ಖಾನ್ ಶಾಕ್ ಆಗಿದ್ದರು ಎಂದು ವರದಿಯಾಗಿದೆ. 11 ಗಂಟೆ ಸುಮಾರಿಗೆ ಸೆಕ್ಯೂರಿಟಿ ಗಾರ್ಡ್ ಫೋನ್ ಮಾಡಿ, ಇಬ್ಬರು ಅಭಿಮಾನಿಗಳು ಮನೆಯೊಳಗೆ ನುಗ್ಗಿದ್ದಾರೆಂದು ಮಾಹಿತಿ ನೀಡಿದ್ದಾಗಿ ಶಾರುಖ್ ಖಾನ್ ಬಂಗ್ಲೆಯ ಮ್ಯಾನೇಜರ್ ಕೊಲೀನ್ ಡಿಸೋಜ ಮಾಹಿತಿ ನೀಡಿದ್ದಾರೆ.

ಶಾರುಖ್ ಖಾನ್ ಮನೆಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿರುವ ಸತೀಶ್ ಕಣ್ಣಿಗೆ ಇಬ್ಬರು ಅಭಿಮಾನಿಗಳು ಬಿದ್ದಿದ್ದರು. ಸತೀಶ್ ಅವರಿಬ್ಬರನ್ನೂ ಮೇಕಪ್ ರೂಮ್‌ನಿಂದ ಲಾಬಿಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಶಾರುಖ್ ಖಾನ್ ಅಪರಿಚಿತರಿಬ್ಬರನ್ನು ನೋಡಿ ಶಾಕ್ ಆಗಿದ್ದರು. ಬಳಿಕ ಬಾಂದ್ರಾದ ಪೊಲೀಸರಿಗೆ ಒಪ್ಪಿಸಲಾಯ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *