ಕೆಲವರಿಗೆ ನನ್ನ ಕೈ ಸನ್ನೆ ಇಷ್ಟವಾಗಿಲ್ಲ – ವಿವಾದದ ಬಗ್ಗೆ ತುಟಿ ಬಿಚ್ಚಿದ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ

ಕೆಲವರಿಗೆ ನನ್ನ ಕೈ ಸನ್ನೆ ಇಷ್ಟವಾಗಿಲ್ಲ – ವಿವಾದದ ಬಗ್ಗೆ ತುಟಿ ಬಿಚ್ಚಿದ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ

ನ್ಯೂಸ್ ಆ್ಯರೋ : ರಿಷಬ್ ಶೆಟ್ಟಿ ನಿರ್ದೇಶನದ ಸ್ಯಾಂಡಲ್ ವುಡ್ ನ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರ ಬದುಕಿನಲ್ಲಿ ಮುಂದೆ ನಡೆದದ್ದೆಲ್ಲ ಇತಿಹಾಸ. ಕಿರಿಕ್ ಪಾರ್ಟಿ ಸಿನಿಮಾದ ಸಾನ್ವಿ ಪಾತ್ರದ ಮೂಲಕ ನ್ಯಾಷನಲ್ ಕ್ರಶ್ ಎಂದು ಕರೆಸಿಕೊಂಡಿದ್ದ ಮಂದಣ್ಣ ಸದ್ಯ ಇಡೀ ಭಾರತೀಯ ಚಿತ್ರರಂಗದ ಬಹು ಬೇಡಿಕೆಯ ಬಹುಭಾಷಾ ನಟಿ. ಆದರೆ ಈ ನಡುವೆ ಆರಂಭದಿಂದಲೂ ಹಲವಾರು ಹೇಳಿಕೆಗಳಿಂದ ನಿರಂತರ ವಿವಾದಗಳನ್ನು ತಮ್ಮ ಮೇಲೆ ಎಳೆದುಕೊಳ್ಳುತ್ತಲೇ ಇದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕನ್ನಡದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಯ ಬಗ್ಗೆ ಕೈ ಸನ್ನೆಯ ಮೂಲಕ ವಿವಾದಾತ್ಮವಾಗಿ ಮಾತನಾಡಿದ್ದ ರಶ್ಮಿಕಾ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು. ಸಾಕಷ್ಟು ಟ್ರೋಲ್ ಗೆ ಒಳಗಾಗಿದ್ದರು. ಸದ್ಯ ಈ ವಿಚಾರದಲ್ಲಿ ರಶ್ಮಿಕಾ ಮೌನ ಮುರಿದು ಮಾತನಾಡಿದ್ದು, ‘ಕೆಲವರಿಗೆ ನನ್ನ ಕೈ ಸನ್ನೆ ಇಷ್ಟವಾಗಿಲ್ಲ’ ಎಂದಿದ್ದಾರೆ.

ಇತ್ತೀಚೆಗೆ ರಶ್ಮಿಕಾ ಮಂದಣ್ಣ ವಿಚಾರದಲ್ಲಿ ನಟ ಕಿಚ್ಚ ಸುದೀಪ್ ಕೂಡ ಪ್ರತಿಕ್ರಿಯಿಸಿದ್ದು ‘ಸೆಲೆಬ್ರಿಟಿ ಅಂದರೆ ಹಾಗೆಯೇ.. ಹೂಮಾಲೆ, ಮೊಟ್ಟೆ, ಟೊಮ್ಯಾಟೊ, ಕಲ್ಲು ಎಲ್ಲವೂ ಬರುತ್ತದೆ. ಹ್ಯಾಂಡಲ್ ಮಾಡೋದನ್ನು ಕಲಿಬೇಕು ಎಂದಿದ್ದರು. ಆದರೆ ಎಷ್ಟೇ ಟ್ರೋಲ್ ಆದರೂ ರಶ್ಮಿಕಾ ತಮ್ಮ ಪಾಡಿಗೆ ತಾವು ಎಂಬಂತೆ ನಟನೆಯಲ್ಲಿ ಬ್ಯುಸಿ ಆಗಿದ್ದರು.

ಆದರೆ ಇದೀಗ ರಶ್ಮಿಕಾ ಮಂದಣ್ಣ ತನ್ನ ವಿರುದ್ಧ ಕೇಳಿ ಬರುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಬಾಲಿವುಡ್ ನಲ್ಲಿ ತಾವು ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿ ‘ಕಲಾವಿದರಾಗಿ ಜನ ನಮ್ಮನ್ನು ಮಾತ್ರ ಇಷ್ಟಪಡಬೇಕೆಂದು ಅಂದುಕೊಳ್ಳುವುದು ತಪ್ಪು ಎಂಬುದು ನನಗೀಗ ಅರಿವಾಗಿದೆ‌. ದ್ವೇಷ, ಪ್ರೀತಿಯೊಂದಿಗೆ ಜನರು ನಮ್ಮನ್ನು ಗಮನಿಸುತ್ತಲೇ ಇರುತ್ತಾರೆ.

ಸೆಲೆಬ್ರಿಟಿ ಅಂದರೆ ಸಾರ್ವಜನಿಕ ವ್ಯಕ್ತಿಗಳಿದ್ದಂತೆ ಎಂದ ಅವರು, ನಾನು ಮಾತನಾಡಿದ ಶೈಲಿ ಅಥವಾ ನನ್ನ ಕೈ ಸನ್ನೆಗಳಿಂದ ಕೆಲವರಿಗೆ ಇಷ್ಟವಾಗಿರಲಿಕ್ಕಿಲ್ಲ. ನಾನು ತುಂಬಾ ಎಕ್ಸ್‌ಪ್ರೆಸಿಟಿವ್ ಆಗಿರುವುದನ್ನ ಜನ ಇಷ್ಟಪಡುತ್ತಿಲ್ಲ. ಜನ ನನ್ನನ್ನು ಟ್ರೋಲ್ ಮಾಡುವುದಕ್ಕೆ, ನನ್ನನ್ನು ಇಷ್ಟ ಪಡದಿರುವುದಕ್ಕೆ ಇವೆಲ್ಲವೂ ಕಾರಣವಾಗಿರಬಹುದು. ಆದರೆ ತುಂಬಾ ಪ್ರೀತಿ ಇದೆ. ಜನರ ಪ್ರೀತಿಗೆ ಕೃತಜ್ಞಳಾಗಿದ್ದೆನೆ ಎಂದರು.

ಸದ್ಯ ಟ್ರೋಲ್ ಗಳ ನಡುವೆಯೂ ರಶ್ಮಿಕಾ ಗಡಿಯಾಚೆಗೂ ಹಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಿಂದಿಯ ಮಿಷನ್ ಮಜ್ನು ಸಿನಿಮಾದ ತೊಡಗಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಾಯಕನಾಗಿ ಸಿದ್ಧಾರ್ಥ್ ಮಲ್ಹೋತ್ರಾ ಕಾಣಿಸಿಕೊಂಡಿದ್ದಾರೆ. ಒಟಿಟಿಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಇನ್ನು ಮತ್ತೊಂದು ಹಿಂದಿ ಸಿನಿಮಾ ಅನಿಮಲ್ ಕೂಡ ಮುಗಿಸಿದ್ದಾರೆ. ರಣಬೀರ್ ಕಪೂರ್ ಜೊತೆ ನಟಿಸಿದ್ದಾರೆ. ಇನ್ನು ದಕ್ಷಿಣದಲ್ಲಿ ತಮಿಳಿನಲ್ಲಿ ದಳಪತಿ ವಿಜಯ್ ಜೊತೆ ವಾರಿಸು ಮತ್ತು ತೆಲುಗಿನಲ್ಲಿ ಪುಷ್ಪ-2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *