ದೇವರು-ದೇವರೇ, ಕಲಾವಿದರು-ಕಲಾವಿದರೇ: ಅಪ್ಪು ದೇವರ ಮಾಲೆಗೆ ನಟ ಪ್ರಥಮ್ ಪ್ರತಿಕ್ರಿಯೆ
- ಮನರಂಜನೆ
- February 24, 2023
- No Comment
- 256
ನ್ಯೂಸ್ಆ್ಯರೋ : ಅಪ್ಪು ದೇವರ ಮಾಲೆ ಧರಿಸಿ ವ್ರತ ಆಚರಿಸುವ ವಿಧಾನದ ಬಗ್ಗೆ ಬಿಗ್ಬಾಸ್ ವಿನ್ನರ್, ನಟ ಪ್ರಥಮ್ ಅವರು ಪ್ರತಿಕ್ರಿಯಿಸಿ, ಕಲಾವಿದರನ್ನ ಕಲಾವಿದರಾಗಿರೋಕೆ ಬಿಡಿ! ಧಾರ್ಮಿಕ ನಂಬಿಕೆಗಳಲ್ಲಿ ಯಾರೂ ಅತೀರೇಕದ ವರ್ತನೆ ತೋರಬಾರದು! ದೇವರು-ದೇವರೇ. ಕಲಾವಿದರು-ಕಲಾವಿದರೇ! ಎಂದು ಟ್ವೀಟ್ ಮಾಡಿದ್ದಾರೆ.
ಈಚೆಗೆ ಪುನೀತ್ ರಾಜ್ಕುಮಾರ್ ಅವರ ಕುರಿತಾದ ದೇವರ ಮಾಲೆ ವ್ರತ ಆಚರಿಸುವ ನೋಟಿಸ್ ವೈರಲ್ ಆಗಿತ್ತು. ಇದರಲ್ಲಿ ಪುನೀತ್ ರಾಜ್ಕುಮಾರ್ ಅವರ ಫೋಟೋ ಕೂಡಾ ಲಗತ್ತಿಸಲಾಗಿತ್ತು. ಮಾರ್ಚ್ 1ರಿಂದ ಅಭಿಮಾನಿಗಳು ಮಾಲೆ ಹಾಕಬಹುದು. ಮಾರ್ಚ್ 17ರ ತನಕ ವ್ರತ ಆಚರಿಸಬೇಕು. ಈ ರೀತಿ ತಮ್ಮದೇ ರೂಲ್ಸ್ ಮಾಡಿದ್ದರು.
ಆದರೆ ಈ ನೋಟಿಸ್ ವೈರಲ್ ಆಗುತ್ತಿದ್ದಂತೆ ಹಾಗೆ ಟ್ರೋಲ್ ಕೂಡಾ ಆಗಿದೆ. ಅಪ್ಪು ಅವರ ಫ್ಯಾನ್ಸ್ ಮಾಡಿದ ನೋಟಿಸ್ ಟೀಕೆಗಳನ್ನು ಎದುರಿಸುತ್ತಿದೆ.
ಈ ನೋಟಿಸು ಸಂಬಂಧ ಟ್ವೀಟ್ ಮಾಡಿದ ಪ್ರಥಮ್, ‘ದೇವರ ಮೇಲೆ ಭಕ್ತಿ ಇರಲಿ!ಕಲಾವಿದರ ಮೇಲೆ ಪ್ರೀತಿ,ಅಭಿಮಾನವಿರಲಿ! ಶಬರಿಮಲೆಗೆ ಹೋಗೋದು ಅಯ್ಯಪ್ಪನಲ್ಲಿ ಶರಣಾಗೋಕೆ. ಬಹಳ ಶಿಸ್ತುಗಳನ್ನ ಪಾಲಿಸಿ ಶ್ರದ್ಧಾಭಕ್ತಿಗಳಿಂದ ಮಾಲೆ ಧಾರಣೆ ಮಾಡಬೇಕು.ಕಲಾವಿದರನ್ನ ಕಲಾವಿದರಾಗಿರೋಕೆ ಬಿಡಿ! ಧಾರ್ಮಿಕ ನಂಬಿಕೆಗಳಲ್ಲಿ ಯಾರೂ ಅತೀರೇಕದ ವರ್ತನೆ ತೋರಬಾರದು! ದೇವರು-ದೇವರೇ. ಕಲಾವಿದರು-ಕಲಾವಿದರೇ!’ ಎಂದು ಟ್ವೀಟ್ ಮಾಡಿದ್ದಾರೆ.