ವೀಕೆಂಡ್ ವಿತ್ ರಮೇಶ್’ ರಿಯಾಲಿಟಿ ಶೋನ ಎರಡನೇ ಅತಿಥಿ ಪ್ರಭುದೇವ – ಭಾರತದ ಮೈಕಲ್ ಜಾಕ್ಸನ್‌ನ ಜನ್ಮ ರಹಸ್ಯ ಬಿಚ್ಚಿಟ್ಟ ಮೂಗೂರು ಸುಂದರ್

ವೀಕೆಂಡ್ ವಿತ್ ರಮೇಶ್’ ರಿಯಾಲಿಟಿ ಶೋನ ಎರಡನೇ ಅತಿಥಿ ಪ್ರಭುದೇವ – ಭಾರತದ ಮೈಕಲ್ ಜಾಕ್ಸನ್‌ನ ಜನ್ಮ ರಹಸ್ಯ ಬಿಚ್ಚಿಟ್ಟ ಮೂಗೂರು ಸುಂದರ್

ನ್ಯೂಸ್‌ ಆ್ಯರೋ : ಝೀ ಕನ್ನಡ ವಾಹಿನಿಯಲ್ಲಿ ‘ವೀಕೆಂಡ್ ವಿತ್ ರಮೇಶ್’ ಐದನೇ ಆವೃತ್ತಿ ಮತ್ತೆ ಆರಂಭವಾಗಿದೆ. ಮೊದಲ ಅತಿಥಿಯಾಗಿ ಮೋಹಕತಾರೆ ರಮ್ಯಾ ಸಾಧಕರ ಸೀಟಿನಲ್ಲಿ ಕೂತಿದ್ದರು. ಎರಡನೇ ಅತಿಥಿಯಾಗಿ ಮೈಸೂರು ಮೂಲಕ ಬಹುಭಾಷಾ ನಟ, ನಿರ್ದೇಶಕ, ಡಾನ್ಸರ್‌ ಪ್ರಭುದೇವ ಭಾಗವಹಿಸಿದ್ದಾರೆ.

ಮೋಹಕ ತಾರೆ ರಮ್ಯಾ ಅವರ ಮೊದಲ ಸಂಚಿಕೆ ಉತ್ತಮವಾಗಿ ಮೂಡಿಬಂದರೂ, ಅತಿಯಾಗಿ ಇಂಗ್ಲಿಷ್‌ ಬಳಸಿ ಟ್ರೋಲ್‌ ಆಗಿದ್ದರು. ಇದೀಗ ಎರಡನೇ ಅತಿಥಿಯಾದ ಭಾರತದ ಮೈಕಲ್ ಜಾಕ್ಸನ್ ಪ್ರಭುದೇವ ಅವರ ಪ್ರೋಮೊವನ್ನು ಬಿಡುಗಡೆ ಮಾಡಲಾಗಿದೆ.

ಪ್ರಭುದೇವ ಅವರ ಎಪಿಸೋಡ್ ಇದೇ ಶನಿವಾರ ಪ್ರಸಾರ ಆಗಲಿದೆ. ಡ್ಯಾನ್ಸಿಂಗ್ ಲೆಜೆಂಡ್ ಪ್ರಭುದೇವ ಅವರು ಹಿಂದೆಂದೂ ಕನ್ನಡದ ಟಿವಿ ಕಾರ್ಯಕ್ರಮದಲ್ಲಿ ತಮ್ಮ ಬದುಕಿನ ಅನಾವರಣವನ್ನು ಮಾಡಿಲ್ಲ. ಹೀಗಾಗಿ ಈ ಪೋಮೊ ಸಖತ್ ಇಂಟ್ರೆಸ್ಟಿಂಗ್ ಅಂತ ಅನಿಸುತ್ತಿದೆ. ಪ್ರೋಮೊದಲ್ಲೇ ಸಾಕಷ್ಟು ಆಸಕ್ತಿದಾಯಕ ಅಂಶಗಳನ್ನು ಕಾಣಬಹುದು.

ಪ್ರಭುದೇವ ಅವರು ಸಾಧಕರ ಸೀಟಿನಲ್ಲಿ ಕೂತು ತಮ್ಮ ಬದುಕಿನ ಅನಾವರಣವನ್ನು ಮಾಡಿರೋ ತುಣುಕುಗಳು ಕಿಕ್ ಕೊಡುತ್ತಿವೆ. ಈ ಸಂಚಿಕೆಯಲ್ಲಿ ಆತ್ಮೀಯರು, ಕುಟುಂಬಸ್ಥರು ಬಂದು ಪ್ರಭುದೇವ ಬಗ್ಗೆ ಮಾಹಿತಿಯನ್ನು ರಿವೀಲ್ ಮಾಡಿದ್ದಾರೆ.

ಪ್ರಭುದೇವ ತಂದೆ ಮೂಗೂರು ಸುಂದರ್ ಎಂಟ್ರಿ ಈ ಎಪಿಸೋಡ್‌ನ ಕೇಂದ್ರಬಿಂದು. ಈ ಪ್ರೋಮೊದಲ್ಲಿ ಮೂಗೂರು ಸುಂದರ್ ಅವರ ಮಗನ ಹುಟ್ಟಿನ ರಹಸ್ಯವನ್ನು ರಿವೀಲ್ ಮಾಡಿದ್ದಾರೆ. ಈ ಪ್ರೋಮೊದಲ್ಲಿ ಬ್ಯಾಕ್‌ಗ್ರೌಂಡ್‌ನಲ್ಲಿ ಪ್ರಭುದೇವ ಅವರ ತಂದೆ, ಮಗ ‘ಅಮಾವಾಸ್ಯೆಯಲ್ಲಿ ಹುಟ್ಟಿದ್ದಾನೆ ಅಂದ್ರು’ ಅಂತ ಹೇಳಿದ್ದಾರೆ. ಇದು ಇಡೀ ಎಪಿಸೋಡ್‌ನ ಕುತೂಹಲದ ಅಂಶವಾಗಿದೆ.

ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲೂ ಪ್ರಭುದೇವ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ. ಅಲ್ಲದೆ, ತಂದೆ ಮೂಗೂರು ಸುಂದರ್ ಜೊತೆ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನಿರೂಪಕ ರಮೇಶ್ ಅರವಿಂದ್ ಜೊತೆ ಪ್ರಭುದೇವ ಮೂನ್ ವಾಕ್ ಮಾಡಿದ್ದಾರೆ. ಇದು ಕೂಡ ಪ್ರೋಮೊದ ಹೈಲೈಟ್. ಹೀಗಾಗಿ ಡ್ಯಾನ್ಸಿಂಗ್ ಲೆಜೆಂಡ್ ಹಾಗೂ ರಮೇಶ್ ಅರವಿಂದ್ ಜುಗಲ್‌ಬಂದಿ ಕೂಡ ಕಾರ್ಯಕ್ರಮದ ಹೈಲೈಟ್.

‘ನಾನು ಆಡೋದೇ ಇಲ್ಲ.. ನನ್ನ ಬಾಡಿನೇ ಆಡೋದು’ ಅಂತ ಅವರ ಡ್ಯಾನ್ಸಿಂಗ್ ಸೀಕ್ರೆಟ್ ಬಗ್ಗೆ ಸುಳಿವನ್ನು ಪ್ರಭುದೇವ ನೀಡಿದ್ದಾರೆ. ಎಪಿಸೋಡ್‌ನ ಇಂಟ್ರೆಸ್ಟಿಂಗ್ ವಿಷಯ ಅಂದ್ರೆ ನಿರ್ದೇಶಕ ಯೋಗರಾಜ್‌ ಭಟ್ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟಿರುವುದು ಕುತೂಹಲಕ್ಕೆ ಕಾರಣವಾಗಿದೆ.

Related post

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…
ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…

Leave a Reply

Your email address will not be published. Required fields are marked *