ಮಲೆಯಾಳಂ ನಿರ್ದೇಶಕಿ ಜೊತೆ ರಾಕಿಂಗ್ ಸ್ಟಾರ್ ಯಶ್ ಸಿನಿಮಾ – ಯಾರು ಗೊತ್ತಾ ಈ ಗೀತು ಮೋಹನ್ ದಾಸ್?
- ಮನರಂಜನೆ
- April 29, 2023
- No Comment
- 173
ನ್ಯೂಸ್ ಆ್ಯರೋ : ಕೆಜಿಎಫ್ ಸಿನಿಮಾ ಮೂಲಕ ಕನ್ನಡ ನೆಲದಲ್ಲಿ ಬಂಗಾರ ಅಗೆದ ರಾಕಿಭಾಯ್, ಎನ್ನಡ ಎಕ್ಕಡ ಎನ್ನುವವರಿಗೆಲ್ಲ ಕನ್ನಡದ ತಾಕತ್ತು ತೋರಿಸಿದ ನರಾಚಿಯ ಚಕ್ರಾಧಿಪತಿ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾಗಾಗಿ ಇಡೀ ಭಾರತೀಯ ಚಿತ್ರರಂಗ ತುದಿಗಾಲಿನಲ್ಲಿ ನಿಂತು ಕಾಯುತ್ತಿದೆ. ಕೆಜಿಎಫ್ -2 ಬಿಡುಗಡೆಯಾಗಿ ಒಂದು ವರ್ಷ ಕಳೆದರೂ ಕೂಡ ಯಶ್ ಮುಂದಿನ ಸಿನಿಮಾ ಯಾವುದು, ನಿರ್ದೇಶಕ ಯಾರು ಎಂಬುದಕ್ಕೆ ಇನ್ನೂ ಉತ್ತರ ದೊರೆತಿಲ್ಲ. ಆದರೆ ಈ ನಡುವೆ ರಾಕಿಂಗ್ ಸ್ಟಾರ್ ಯಶ್ ಮಲೆಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಅವರೊಂದಿಗೆ ಸಿನಿಮಾ ಮಾಡಲಿದ್ದಾರೆ ಎಂಬ ಮಾತು ಬಲವಾಗಿ ಕೇಳಿ ಬರುತ್ತಿದೆ.
ಹೌದು, ಈಗಾಗಲೇ ಕೇವಲ ಎರಡು ಸಿನಿಮಾಗಳನ್ನು ಮಾಡಿದ್ದರೂ ಕೂಡ ಎರಡು ರಾಷ್ಟ್ರ ಪ್ರಶಸ್ತಿ ಪಡೆದಿರುವ ಭಾರತದ ಖ್ಯಾತ ನಿರ್ದೇಶಕಿ ಗೀತು ಮೋಹನ್ ದಾಸ್ ಅವರೊಂದಿಗೆ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಯಶ್ ಎಲ್ಲರನ್ನೂ ಬಿಟ್ಟು ಒಬ್ಬ ಮಹಿಳಾ ನಿರ್ದೇಶಕಿಯನ್ನು ಆರಿಸಿಕೊಳ್ಳಲು ಕಾರಣವೇನು? ಗೀತು ಅವರಲ್ಲಿ ಅಂತಹಾ ಸ್ಪೆಷಾಲಿಟಿ ಏನಿದೆ? ಅವರು ನಿರ್ದೇಶಿಸಿದ ಈ ಹಿಂದಿನ ಸಿನಿಮಾಗಳು ಯಾವುದು? ಎಂಬುದನ್ನ ನೋಡೋಣ ಬನ್ನಿ.
ಯಾರು ಗೀತು ಮೋಹನ್ ದಾಸ್?
ಗೀತು ಮೋಹನ್ ದಾಸ್ ಕಮರ್ಷಿಯಲ್ ಆಗಿ ದೊಡ್ಡ ಹೆಸರು ಮಾಡದಿದ್ದರೂ ಮಲೆಯಾಳಂ ಇಂಡಸ್ಟ್ರಿಯ ನಂಬಿಕಸ್ಥ ನಿರ್ದೇಶಕಿ. ನಟಿ ಹಾಗೂ ನಿರ್ದೇಶಕಿಯಾಗಿ ಗುರುತಿಸಿಕೊಂಡಿರುವ ಇವರು 1986ರಲ್ಲಿ ಮೊದಲ ಬಾರಿಗೆ ಬಾಲ ನಟಿಯಾಗಿ ಬಣ್ಣ ಹಚ್ಚಿದರು. ನಟಿಸಿದ ಮೊದಲ ಚಿತ್ರಕ್ಕೆ ಅತ್ಯುತ್ತಮ ಬಾಲ ನಟಿ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದರು. ಅನಂತರ ನಾಯಕಿ ಹಾಗೂ ಪೋಷಕ ಪಾತ್ರಗಳಲ್ಲಿ ನಟಿಸಿದರು.
2004ರಲ್ಲಿ ಕಿರುಚಿತ್ರವೊಂದನ್ನು ನಿರ್ದೇಶಿಸಿದ ಇವರು ಅನಂತರ 2009ರಲ್ಲಿ ತಮ್ಮ ಮೊದಲ ಚಿತ್ರ ‘ಲಯರ್ಸ್ ಡೈಸ್’ ಗೆ ಆ್ಯಕ್ಷನ್ ಕಟ್ ಹೇಳಿದರು. ಇದರ ನಂತರ 2019ರಲ್ಲಿ ನಿವೀನ್ ಪೊಲಿಯವರಿಗೆ ಹಿಂದಿಯಲ್ಲಿ ‘ಮೂತಾನ್’ ಎಂಬ ಸಿನಿಮಾ ನಿರ್ದೇಶನ ಮಾಡಿದರು. ಸದ್ಯ, ಇದೇ ಗೀತು ಮೋಹನ್ ದಾಸ್ ಅವರು ರಾಕಿಂಗ್ ಸ್ಟಾರ್ ಯಶ್ ಅವರಿಗೆ ಕತೆಯೊಂದನ್ನು ಬರೆದಿದ್ದು, ಯಶ್ ಕೂಡ ಇಷ್ಟ ಪಟ್ಟಿದ್ದಾರೆ ಎಂಬ ಮಾತು ಮುನ್ನೆಲೆಗೆ ಬಂದಿದೆ.
ಆದರೆ ಇತ್ತೀಚೆಗಷ್ಟೇ ಶ್ರೀಲಂಕಾಕ್ಕೆ ಹಾರಿದ್ದ ಯಶ್ ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೆ ಸಿನಿಮಾ ಒಂದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಲೊಕೇಶನ್ ಹುಡುಕಾಟದಲ್ಲಿದ್ದಾರೆ ಎನ್ನಲಾಗಿತ್ತು. ಆದರೆ ಈಗಿನ ಮಾಹಿತಿಯ ಪ್ರಕಾರ ಗೀತು ಮೋಹನ್ ದಾಸ್ ಸ್ಕ್ರಿಪ್ಟ್ ಕೇಳಿರುವ ಯಶ್ ಇಂಪ್ರೆಸ್ ಆಗಿದ್ದು, ಆದಷ್ಟು ಬೇಗ ಚಿತ್ರೀಕರಣಕ್ಕೆ ಇಳಿಯುವಂತೆ ಸೂಚಿಸಿದ್ದಾರಂತೆ. ಈ ಎಲ್ಲಾ ವಿಚಾರಗಳು ನಿಜವಾಗಿದ್ದ