ಇಂದಿನಿಂದ ತುಳು ಭಾಷೆಯಲ್ಲಿ ಕಾಂತಾರ ಅಬ್ಬರ – ವಿಶೇಷವಾಗಿ ಗಮನಸೆಳೆದ ಕಾಪಿಕಾಡ್ ತಂದೆ ಮಗನ ಜುಗುಲ್ಬಂದಿ ಡಬ್ಬಿಂಗ್…!!

ಇಂದಿನಿಂದ ತುಳು ಭಾಷೆಯಲ್ಲಿ ಕಾಂತಾರ ಅಬ್ಬರ – ವಿಶೇಷವಾಗಿ ಗಮನಸೆಳೆದ ಕಾಪಿಕಾಡ್ ತಂದೆ ಮಗನ ಜುಗುಲ್ಬಂದಿ ಡಬ್ಬಿಂಗ್…!!

ನ್ಯೂಸ್ ಆ್ಯರೋ : ಈಗಾಗಲೇ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತಿತರ ಭಾಷೆಗಳಲ್ಲಿ ಡಬ್‌ ಆಗಿ ಕೋಟ್ಯಾಂತರ ಮೊತ್ತ ಬಾಚುತ್ತಿರುವ, ಹಿಂದಿನ ಎಲ್ಲ ಸಿನಿಮಾಗಳ ದಾಖಲೆ ಹಿಂದಿಕ್ಕುತ್ತಿರುವ ಕಾಂತಾರ ಸಿನಿಮಾ ಕರಾವಳಿ ನೆಲದ ಭಾಷೆಯಲ್ಲಿ ಇದೇ ಮೊದಲ ಬಾರಿಗೆ ತೆರೆ ಕಾಣುತ್ತಿದೆ. ಅದು ಕೂಡ ಕರಾವಳಿ ಹಾಗೂ ಕರಾವಳಿಗರೇ ಹೆಚ್ಚಾಗಿ ಇರುವ ವಿದೇಶಿ ಟಾಕೀಸ್‌ಗಳಲ್ಲಿ ಎಂಬುದು ಗಮನಾರ್ಹ. ದುಬೈನಲ್ಲಿ ಈಗಾಗಲೇ ತುಳುವಿನಲ್ಲಿ ತೆರೆ ಕಂಡಿದೆ.

ಮಂಗಳೂರಿನ ಪಿವಿಆರ್‌, ಸಿನಿ ಪೊಲೀಸ್‌, ಬಿಗ್‌ ಸಿನಿಮಾಸ್‌, ಸಿನಿ ಗ್ಯಾಲಕ್ಸಿ ಸುರತ್ಕಲ್‌, ಭಾರತ್‌ ಸಿನಿಮಾಸ್‌ ಪಡುಬಿದ್ರಿ, ಉಡುಪಿಯ ಮಲ್ಟಿಪ್ಲೆಕ್ಸ್‌ ಮತ್ತು ಸಿಂಗಲ್‌ ಸ್ಕ್ರೀನ್‌ಗಳಲ್ಲಿ ಕಾಂತಾರ ತುಳುವಿನಲ್ಲಿ ಅಬ್ಬರಿಸುವ ಸಾಧ್ಯತೆ ಇದೆ. ಕಳೆದ ಮೂರು ವರ್ಷಗಳಿಂದ ತುಳು ಸಿನಿಮಾ ಪ್ರದರ್ಶನದಿಂದ ದೂರ ಇದ್ದ ಸುಚಿತ್ರಾ ಪ್ರಭಾತ್‌ ಟಾಕೀಸ್‌ನಲ್ಲೂ ಈ ಬಾರಿ ಕಾಂತಾರ ಪ್ರವೇಶ ಮಾಡುತ್ತಿದೆ. ಅಲ್ಲಿ ಬೆಳಗ್ಗೆ ಮತ್ತು ಸಂಜೆ ದಿನದಲ್ಲಿ ಎರಡು ಶೋ ನಿಗದಿಯಾಗಿದೆ.

ಮಲ್ಟಿಪ್ಲೆಕ್ಸ್‌ಗಳಲ್ಲಿ ದಿನದಲ್ಲಿ ಮೂರ್ನಾಲ್ಕು ಶೋ ನಿಗದಿಯಾಗಿದ್ದು, ಮೊದಲ ದಿನ ಮುಂಗಡ ಬುಕ್ಕಿಂಗ್‌ ಅಷ್ಟಾಗಿ ಕಂಡುಬಂದಿಲ್ಲ. ಬುಕ್‌ ಮೈ ಶೋದಲ್ಲಿ ಕಾಂತಾರ ತುಳು ಪೋಸ್ಟರ್‌ ಸದ್ದುಮಾಡುತ್ತಿದ್ದು, ಈಗಾಗಲೇ 1,700 ಮಂದಿ ಲೈಕ್‌ ಮಾಡಿದ್ದಾರೆ.

ತುಳು ಭಾಷಿಗರ ಕುತೂಹಲ ಕೆರಳಿಸಿರುವ ಕಾಂತಾರ ತುಳು ಸಿನಿಮಾ ವಿಭಿನ್ನವಾಗಿ ಕರಾವಳಿಯ ಆಡುಭಾಷೆಯಲ್ಲಿ ಮೂಡಿಬರುವಂತೆ ಚಿತ್ರತಂಡ ಪ್ರಯತ್ನ ನಡೆಸಿದೆ. ಶಿವನ ಪಾತ್ರ(ರಿಷಬ್‌ ಶೆಟ್ಟಿ)ಕ್ಕೆ ಅರ್ಜುನ್‌ ಕಾಪಿಕಾಡ್‌, ಲೀಲಾ(ಸಪ್ತಮಿ ಗೌಡ)ಪಾತ್ರಕ್ಕೆ ಪ್ರಾರ್ಥನಾ ಸುದರ್ಶನ್‌, ಅರಣ್ಯಾಧಿಕಾರಿ(ಕಿಶೋರ್‌) ಪಾತ್ರಕ್ಕೆ ಶಶಿರಾಜ್‌ ಕಾವೂರು, ಧನಿ(ಅಚ್ಚುತ ಕುಮಾರ್‌) ಪಾತ್ರಕ್ಕೆ ದೇವದಾಸ್‌ ಕಾಪಿಕಾಡ್‌ ಡಬ್ಬಿಂಗ್‌ನಲ್ಲಿ ಸ್ವರ ದಾನ ಮಾಡಿದ್ದಾರೆ. ಹಾಡುಗಳನ್ನು ಬಹುತೇಕ ಕನ್ನಡದಲ್ಲೇ ಉಳಿಸಿಕೊಳ್ಳಲಾಗಿದೆ. ಕಾಂತಾರದಲ್ಲಿ ಶಿವನ ಸ್ನೇಹಿತ ಬುಲ್ಲಾನ ಪಾತ್ರ ಮಾಡಿದ ಮಂಗಳೂರಿನ ಸನಿಲ್‌ ಗುರು ತುಳು ಅವತರಣಿಕೆಯ ನಿರ್ವಹಣೆ ಮಾಡಿದ್ದಾರೆ.

Related post

ದಿನ‌ ಭವಿಷ್ಯ 29-03-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 29-03-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದೈಹಿಕ ರಚನೆಯನ್ನು ಕಾಯ್ದುಕೊಳ್ಳಲು ನೆರವಾಗುವ ಕೆಲವು ಕ್ರೀಡಾ ಚಟುವಟಿಕೆಗಳನ್ನು ನೀವು ಇಂದು ಆನಂದಿಸಬಹುದು. ನೀವು ದೀರ್ಘಕಾಲದ ಆಧಾರದ ಮೇಲೆ ಹೂಡಿಕೆ ಮಾಡಿದಲ್ಲಿ ಗಣನೀಯ ಲಾಭ ಮಾಡುತ್ತೀರಿ. ನೀವು…
ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಭರ್ಜರಿ ಪ್ರಚಾರ – ಅತೃಪ್ತ ಬಿಲ್ಲವರ ವೋಟ್ ಬ್ಯಾಂಕ್ ಸೆಳೆಯಲು ಚಿಂತನೆ

ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಭರ್ಜರಿ ಪ್ರಚಾರ…

ನ್ಯೂಸ್ ಆ್ಯರೋ : ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪರ ಚುನಾವಣಾ ಪ್ರಚಾರ ಆರಂಭಕ್ಕೂ‌ ಮೊದಲೇ ಬಿರುಸುಗೊಂಡಿದ್ದು, ಬಿಲ್ಲವ ಸಮಯದಾಯವನ್ನು ಒಗ್ಗೂಡಿಸುವ…
ದಿನ‌ ಭವಿಷ್ಯ 27-03-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 27-03-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಇಂದು ನಿಮ್ಮ ಹಣವನ್ನು ಅನೇಕ ವಿಷಯಗಳಿಗೆ ಖರ್ಚು ಮಾಡಬಹುದು, ನೀವು ಇಂದು ಉತ್ತಮ ಬಜೆಟ್ ಅನ್ನು ಯೋಜಿಸಬೇಕಾಗಿದೆ,…

Leave a Reply

Your email address will not be published. Required fields are marked *