ಉದ್ಯಮಿ ಜತೆ ಓಡಾಟ: 64ನೇ ವಯಸ್ಸಿನಲ್ಲಿ ಮೂರನೇ ಮದುವೆಯಾದ ಸ್ಟಾರ್‌ ನಟಿ?

ಉದ್ಯಮಿ ಜತೆ ಓಡಾಟ: 64ನೇ ವಯಸ್ಸಿನಲ್ಲಿ ಮೂರನೇ ಮದುವೆಯಾದ ಸ್ಟಾರ್‌ ನಟಿ?

ನ್ಯೂಸ್ ಆ್ಯರೋ: ಮದುವೆ ವಿಷಯಕ್ಕೆ ಬಣ್ಣದ ಬದುಕಿನ ಮಂದಿ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಮದುವೆ, ಡಿವೋರ್ಸ್‌, ವಿವಾದ ಸೇರಿದಂತೆ ಅನೇಕ ವಿಚಾರಕ್ಕೆ ನೆಟ್ಟಿಗರಿಗೆ ಆಹಾರವಾಗುವುದು ಸರ್ವೇ ಸಾಮಾನ್ಯ.

ಇದೀಗ ಭಾರತೀಯ ಸಿನಿಮಾರಂಗಗ ಖ್ಯಾತ ಹಿರಿಯ ನಟಿ ತಮ್ಮ 64ನೇ ವಯಸ್ಸಿನಲ್ಲಿ ಮದುವೆ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಸಿನಿಮಾ ರಂಗದಲ್ಲಿ ಹೆಸರು ಗಳಿಸಿದ್ದ ನಟಿ ಜಯಸುಧಾ ಅವರು ತಮ್ಮ 64ನೇ ವಯಸ್ಸಿನಲ್ಲಿ ಮೂರನೇ ಮದುವೆ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

80ರ ದಶಕದಲ್ಲಿ ನಾಯಕಿಯಾಗಿ ತೆರೆಮೇಲೆ ಮಿಂಚಿ, ಸ್ಟಾರ್‌ ನಟರ ಜತೆಗೆ ತೆರೆಹಂಚಿಕೊಂಡಿದ್ದ ಈ ನಟಿ ಇದೀಗ ಎಲ್ಲ ಕಡೆಗಳಲ್ಲಿ ಉದ್ಯಮಿಯೊಬ್ಬರ ಜತೆ ಕಾಣಿಸಿಕೊಳ್ಳುತ್ತಿದ್ದಾರೆ.

ನಟಿ ಜಯಸುಧಾ ಅವರಿಗೆ ಈಗಾಗಲೇ ಎರಡು ಮದುವೆಯಾಗಿದೆ. ನಿರ್ಮಾಪಕ ವಡ್ಡೆ ರಮೇಶ್‌ ಅವರನ್ನು ಜಯಸುಧಾ ಅವರು ವಿವಾಹವಾಗಿದ್ದರು. ಭಿನ್ನಾಭಿಪ್ರಾಯದಿಂದ ಇವರಿಬ್ಬರು ಡಿವೋರ್ಸ್‌ ಪಡೆದುಕೊಂಡಿದ್ದರು. ಬಳಿಕ 1985ರಲ್ಲಿ ಬಾಲಿವುಡ್‌ ನಟ ಜೀತೇಂದ್ರ ಅವರ ಸಂಬಂಧಿ ನಿತಿನ್‌ ಕಪೂರ್‌ ಅವರನ್ನು ಜಯಸುಧಾ ಎರಡನೇ ಮದುವೆ ಆಗಿದ್ದರು. 2017ರಲ್ಲಿ ನಿತಿನ್‌ ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಪತಿ ಇಲ್ಲವಾಗಿ ಆರು ವರ್ಷಗಳ ಬಳಿಕ ಮತ್ತೋರ್ವ ಉದ್ಯಮಿ ಜತೆ 64ನೇ ವಯಸ್ಸಿನಲ್ಲಿ ಮದುವೆ ಆಗಿದ್ದಾರೆ ಎನ್ನುವ ವದಂತಿ ಹರಿದಾಡುತ್ತಿದೆ.

ಕಂಗನಾಗೆ ಪದ್ಮಶ್ರೀ ನೀಡಿದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಯಸುಧಾ:

“ಬಾಲಿವುಡ್‌ ನಟಿ ಕಂಗನಾ ರಣಾವತ್‌ಗೆ ಪದ್ಮಶ್ರೀ ಪ್ರಶಸ್ತಿ ಬಂದಿರುವುದಕ್ಕೆ ನಮ್ಮ ತಕರಾರಿಲ್ಲ. ಅವರೊಬ್ಬ ಒಳ್ಳೆಯ ನಟಿ. ಕೇವಲ 10 ಸಿನಿಮಾಗಳಲ್ಲಿ ನಟಿಸುತ್ತಿದ್ದಂತೆ ಅವರಿಗೆ ಪದ್ಮ ಅವಾರ್ಡ್‌ ಸಿಕ್ಕಿತು. ಆದರೆ, ನಾವು ಎಷ್ಟೋ ಸಿನಿಮಾ ಮಾಡಿದರೂ ಇನ್ನೂ ಸರ್ಕಾರದ ಗಮನಕ್ಕೆ ಬಂದಿಲ್ಲ” ಎಂದು ಅಸಮಧಾನ ವ್ಯಕ್ತಪಡಿಸಿದ್ದರು.

“2002ರಲ್ಲಿ ಗಿನ್ನೆಸ್‌ ರೆಕಾರ್ಡ್‌ ಮಾಡಿದ ನಿರ್ದೇಶಕಿ ವಿಜಯ ನಿರ್ಮಲಾಗೂ ಈ ಗೌರವ ದಕ್ಕಿಲ್ಲ ಎಂಬುದೇ ವಿಪರ್ಯಾಸ. ಇಡೀ ವಿಶ್ವದಲ್ಲಿಯೇ ಮಹಿಳಾ ನಿರ್ದೇಶಕಿಯೊಬ್ಬರು 44 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ ಎಂದರೆ ವಿಜಯ ನಿರ್ಮಲಾ ಮಾತ್ರ. ಹೀಗೆ ಸೌತ್‌ ಚಿತ್ರರಂಗವನ್ನು ಸರ್ಕಾರ ಕಡೆಗಣಿಸುವುದು ನಿಜಕ್ಕೂ ಬೇಸರದ ಸಂಗತಿ” ಎಂದು ಬೇಸರ ವ್ಯಕ್ತಪಡಿಸಿದ್ದರು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *