ಮಗಳ ವಯಸ್ಸಿನ ನಟಿಯ ಜೊತೆ ವಿವಾಹಕ್ಕೆ ತಯಾರಾದ ಅಮಿರ್ ಖಾನ್? – ಯಾರದು‌ ನಟಿ? ಏನಿದೆ ಹೊಸ ಅಪ್ ಡೇಟ್?

ಮಗಳ ವಯಸ್ಸಿನ ನಟಿಯ ಜೊತೆ ವಿವಾಹಕ್ಕೆ ತಯಾರಾದ ಅಮಿರ್ ಖಾನ್? – ಯಾರದು‌ ನಟಿ? ಏನಿದೆ ಹೊಸ ಅಪ್ ಡೇಟ್?

ನ್ಯೂಸ್ ಆ್ಯರೋ‌ : ‘ದಂಗಲ್’, ‘ಥಗ್ಸ್ ಆಫ್ ಹಿಂದೂಸ್ತಾನ್’ ಚಿತ್ರಗಳಲ್ಲಿ ತನ್ನೊಂದಿಗೆ ನಟಿಸಿದ ಫಾತಿಮಾ ಸನಾ ಶೇಕ್ ಜೊತೆ ಆಮೀರ್ ಖಾನ್ ಸಪ್ತಪದಿ ತುಳಿಯಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಸಂಚಲನ ಮೂಡಿಸಿದೆ.

ಆಮೀರ್, ಮಗಳ ವಯಸ್ಸಿನ ಫಾತಿಮಾ ಸನಾ ಶೇಖ್ ಅವರನ್ನು ಶೀಘ್ರದಲ್ಲೇ ಮದುವೆಯಾಲಿದ್ದಾರೆ. ಆಮೀರ್ ಖಾನ್ ತಮ್ಮ ‘ದಂಗಲ್’ ಸಿನಿಮಾ ಸಮಯದಿಂದಲೂ ಸನಾ ಜೊತೆ ಡೇಟಿಂಗ್‌ನಲ್ಲಿದ್ದಾರೆ ಎಂದು ವಿಮರ್ಶಕ ಕಮಲ್ ಆರ್. ಖಾನ್ ಟ್ವೀಟ್ ಮಾಡಿದ್ದಾರೆ.

ಫಾತಿಮಾಗೆ ಆಮೀರ್ ಖಾನ್ ಕುಟುಂಬದ ಜೊತೆ ಹೆಚ್ಚು ಆಪ್ತತೆ ಇದೆ. ಆಮೀರ್ ಪುತ್ರಿ ಇರಾ ಖಾನ್ ಜೊತೆಯೂ ಒಳ್ಳೆಯ ಬಾಂಧವ್ಯವಿದೆ. ಹಾಗಾಗಿ ಇವರಿಬ್ಬರು ಮದುವೆಯಾಗುವುದು ಖಚಿತ ಎನ್ನುತ್ತಿದೆ ಕೆಲವು ಮೂಲಗಳು. ಇತ್ತೀಚೆಗೆ ಆಮೀರ್​ ಖಾನ್​ ಮತ್ತು ಫಾತಿಮಾ ಸನಾ ಶೇಖ್​​ ಒಟ್ಟಾಗಿ ಆಡುತ್ತಿದ್ದ ವೀಡಿಯೋ ವೈರಲ್ ಆಗಿತ್ತು.

ಆಮೀರ್ ಖಾನ್​ ಮತ್ತು ಕಿರಣ್​ ರಾವ್​ 2021ರಲ್ಲಿ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದರು. ಸುಮಾರು 17 ವರ್ಷ ಒಟ್ಟಿಗೆ ಬಾಳಿದ್ದ ಜೋಡಿ ವಿಚ್ಛೇದನ ಪಡೆದುಕೊಂಡಿತ್ತು. ಅಂದಿನಿಂದ ಆಮೀರ್ ಖಾನ್​ ಬಗ್ಗೆ ಗಾಸಿಪ್ ಹರಿದಾಡುತ್ತಿದ್ದವು. ಮದುವೆ ವಿಚಾರ ಕುರಿತು ಆಮೀರ್ ಖಾನ್ ಇದುವರೆಗೆ ಸ್ಪಷ್ಟನೆ ನೀಡಿಲ್ಲ.

ಸತತ ಸೋಲುಗಳ ಬಳಿಕ ಇದೀಗ ಆಮೀರ್ ಖಾನ್ ನಟನೆಯಿಂದ ಸ್ವಲ್ಪ ದಿನ ದೂರ ಉಳಿದಿದ್ದಾರೆ. ಸದ್ಯಕ್ಕೆ ಅವರು ಯಾವುದೇ ಚಿತ್ರಗಳನ್ನು ಒಪ್ಪಿಕೊಂಡಿಲ್ಲ.

Related post

ಪ್ರೇಯಸಿ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾಳಾ? – ಈ ತಪ್ಪುಗಳು ನಿಮ್ಮಲ್ಲೂ ಇರಬಹುದು ಗಮನಿಸಿ…

ಪ್ರೇಯಸಿ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾಳಾ? – ಈ ತಪ್ಪುಗಳು ನಿಮ್ಮಲ್ಲೂ ಇರಬಹುದು ಗಮನಿಸಿ…

ನ್ಯೂಸ್ ಆ್ಯರೋ‌ : ನಾವು ಪ್ರೀತಿಸುವ ಜೀವಗಳು ನಮ್ಮನ್ನು ದೂರ ಮಾಡಿದರೆ, ನಮ್ಮನ್ನು ನಿರ್ಲಕ್ಷ್ಯ ಮಾಡಿದರೆ ಅದರಿಂದಾಗುವ ನೋವು ಅಪಾರ. ಅದರಲ್ಲೂ ಪ್ರೇಯಸಿ ದೂರ ಮಾಡುತ್ತಿದ್ದರೆ ಅದನ್ನು ಸಹಿಸಲು…
ಮಲಗುವ ವಿಚಾರಕ್ಕೆ ಮಗಳಿಗೆ 25 ಬಾರಿ ಚೂರಿಯಿಂದ ಇರಿದು ಕೊಂದ ಅಪ್ಪ – ಸಿಸಿಟಿವಿಯಲ್ಲಿ ಘೋರ ಕೃತ್ಯ ಸೆರೆ, ವಿಡಿಯೋ ವೈರಲ್…!!

ಮಲಗುವ ವಿಚಾರಕ್ಕೆ ಮಗಳಿಗೆ 25 ಬಾರಿ ಚೂರಿಯಿಂದ ಇರಿದು ಕೊಂದ ಅಪ್ಪ…

ನ್ಯೂಸ್ ಆ್ಯರೋ : ಮಲಗುವ ವಿಚಾರಕ್ಕೆ ಉಂಟಾದ ಜಗಳದ ಹಿನ್ನೆಲೆಯಲ್ಲಿ ಸೂರತ್‌ನ ವ್ಯಕ್ತಿಯೊಬ್ಬ ತನ್ನ ಮಗಳಿಗೆ 25 ಬಾರಿ ಇರಿದು ಕೊಂದಿರುವ ಘಟನೆ ನಡೆದಿದೆ. ಇಡೀ ಕೃತ್ಯ ಸಿಸಿಟಿವಿಯಲ್ಲಿ…
ಕೊರಗಜ್ಜ ಮೂಲಸ್ಥಾನ ಕುತ್ತಾರಿಗೆ ಭೇಟಿ ನೀಡಿದ ರಚಿತಾ ರಾಮ್ – ಕೊರಗಜ್ಜನ ಕಾರಣಿಕದಿಂದಾಗಿಯೇ ಇಲ್ಲಿಗೆ ಬಂದೆ ಎಂದ ಗುಳಿಕೆನ್ನೆ ಬೆಡಗಿ..

ಕೊರಗಜ್ಜ ಮೂಲಸ್ಥಾನ ಕುತ್ತಾರಿಗೆ ಭೇಟಿ ನೀಡಿದ ರಚಿತಾ ರಾಮ್ – ಕೊರಗಜ್ಜನ…

ನ್ಯೂಸ್ ಆ್ಯರೋ : ಸ್ಯಾಂಡಲ್ ವುಡ್ ಬೆಡಗಿ, ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಅವರು ಬುಧವಾರ ಮಂಗಳೂರು ಸಮೀಪದ ಕುತ್ತಾರು ದೆಕ್ಕಾಡಿನ ಕೊರಗಜ್ಜ ದೈವದ ಆದಿ ಸ್ಥಳಕ್ಕೆ ಭೇಟಿ…

Leave a Reply

Your email address will not be published. Required fields are marked *