ಕೊರಿಯನ್‌ ಸಿಂಗರ್ ಜಿಮಿನ್‌ನಂತೆ ಕಾಣಲು 12 ಪ್ಲಾಸ್ಟಿಕ್‌ ಸರ್ಜರಿ: ₹1.80 ಕೋಟಿ ಖರ್ಚು ಮಾಡಿದ್ದ ಯುವ ನಟ ಸಾವು

ಕೊರಿಯನ್‌ ಸಿಂಗರ್ ಜಿಮಿನ್‌ನಂತೆ ಕಾಣಲು 12 ಪ್ಲಾಸ್ಟಿಕ್‌ ಸರ್ಜರಿ: ₹1.80 ಕೋಟಿ ಖರ್ಚು ಮಾಡಿದ್ದ ಯುವ ನಟ ಸಾವು

ನ್ಯೂಸ್‌ ಆ್ಯರೋ: ದಕ್ಷಿಣ ಕೊರಿಯಾದ ಖ್ಯಾತ ಸಿಂಗರ್ ಜಿಮಿನ್ ಹಾಗೆಯೇ ಕಾಣಬೇಕು ಎಂದು ಸುಮಾರು ₹1.80 ಕೋಟಿ ಖರ್ಚು ಮಾಡಿ 12 ಸರ್ಜರಿ ಮಾಡಿಸಿದ್ದ ಯುವಕ ಮೃತಪಟ್ಟಿದ್ದಾನೆ.

ಸಂಗೀರ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ಕನಸು ಕಂಡಿದ್ದ 22 ವರ್ಷದ ಕೆನಡಿಯನ್ ನಟ ಸೇಂಟ್ ವಾನ್ ಕೊಲುಸಿ ಬಾರದ ಲೋಕಕ್ಕೆ ಹೋಗಿದ್ದಾನೆ.

ಕೊರಿಯಾದ ಖ್ಯಾತ ಬಿಟಿಎಸ್ ಬ್ಯಾಂಡ್‌ನ ಸದಸ್ಯ ಜಿಮಿನ್ ರೀತಿ ಕಾಣಿಸಬೇಕು ಎಂದು ಬಯಸಿದ್ದ ಯುವಕ 12 ಸರ್ಜರಿ ಮಾಡಿಸಿ, ದಕ್ಷಿಣ ಕೊರಿಯಾದ ಆಸ್ಪತ್ರೆಯಲ್ಲಿ ಭಾನುವಾರ ಮೃತಪಟ್ಟಿದ್ದಾನೆ.

ಆತನಕ ಸಾವಿಗೆ ಪ್ಲಾಸ್ಟಿಕ್ ಸರ್ಜರಿಯೇ ಕಾರಣ ಎನ್ನಲಾಗಿದೆ. ಕೆಲವು ತಿಂಗಳ ಹಿಂದೆ ಈತ 12 ಪ್ಲಾಸ್ಟಿಕ್ ಸರ್ಜರಿಗಳನ್ನು ಮಾಡಿಸಿಕೊಂಡಿದ್ದು, ಇದಾದ ನಂತರ ಆತನ ಆರೋಗ್ಯದಲ್ಲಿ ಏರುಪೇರಾಗಿತ್ತು. ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸೇಂಟ್ ವಾನ್ ಕೊಲುಸಿ ಒಟ್ಟು 12 ಬಾರಿ ಪ್ಲಾಸ್ಟಿಕ್ ಸರ್ಜರಿಗಾಗಿ 220,000 ಡಾಲರ್ ಅಂದರೆ (₹1.80 ಕೋಟಿ) ಖರ್ಚು ಮಾಡಿದ್ದ. ಸರ್ಜರಿಯ ನಂತರ ಅಮೆರಿಕದಲ್ಲಿ ಪ್ರಸಾರದಲ್ಲಿರುವ ಕೆ ಪಾಪ್ ಸ್ಟಾರ್ ಸೀರಿಸ್‌ನಲ್ಲಿ ನಟಿಸಲು ಆತ ಬಯಸಿದ್ದ ಎನ್ನಲಾಗಿದೆ.

ಕಳೆದ ನವೆಂಬರ್‌ನಲ್ಲಿ ಈತ ಮಾಡಿಸಿಕೊಂಡಿದ್ದ ದವಡೆಯ ಕಸಿಯನ್ನು ತೆಗೆದು ಹಾಕಲು ಆತ ಮತ್ತೆ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿದ್ದ. ಆದರೆ, ಶಸ್ತ್ರಚಿಕಿತ್ಸೆ ನಂತರ ಆತನಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಶಸ್ತ್ರಚಿಕಿತ್ಸೆ ಅಪಾಯಕಾರಿ ಎಂಬುದು ಆತನಿಗೆ ತಿಳಿದಿದ್ದರೂ ಆತ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ, ಬಳಿಕ ಸೋಂಕು ಉಲ್ಭಣಗೊಂಡು ಸೇಂಟ್ ವಾನ್ ಕೊಲುಸಿ ಸಾವಿನ ಮನೆಗೆ ಹೋಗಿದ್ದಾನೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *