ಸ್ಕೂಟರ್​ನಲ್ಲಿ ತೆರಳುವಾಗ ಈರುಳ್ಳಿ ಬಾಂಬ್​ ಸ್ಫೋಟ; ಓರ್ವ ಸಾವು, ಭಯಾನಕ ದೃಶ್ಯ ಸೆರೆ

Onion bombs
Spread the love

ನ್ಯೂಸ್ ಆ್ಯರೋ: ದೀಪಾವಳಿ ಹಬ್ಬದಂದು ಪಟಾಕಿ ಸಿಡಿದು ಓರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಆಂಧ್ರಪ್ರದೇಶದ ಎಲೂರು ಜಿಲ್ಲೆಯಲ್ಲಿ ಈ ಅವಘಡ ನಡೆದಿದೆ. ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ.

ಸಾವನ್ನಪ್ಪಿರುವ ವ್ಯಕ್ತಿಯನ್ನು ಸುಧಾಕರ್​ ಎಂದು ಗುರುತಿಸಾಗಿದೆ. ಸುಧಾಕರ್​ ದೀಪಾವಳಿ ಹಬ್ಬದ ವಿಶೇಷವಾಗಿ ಸ್ನೇಹಿತನೊಂದಿಗೆ ತನ್ನ ಸ್ಕೂಟರ್​ನಲ್ಲಿ ಈರುಳ್ಳಿ ಬಾಂಬ್​​ ಸಾಗಿಸುತ್ತಿದ್ದರು. ಹೀಗೆ ಸಾಗಿಸುತ್ತಿದ್ದಾಗ ಸ್ಕೂಟರ್​ ಸ್ಥಳೀಯ ದೇವಸ್ಥಾನದ ಬಳಿ ತಲುಪುತ್ತಿದ್ದಂತೆ ಸ್ಫೋಟಗೊಂಡಿದೆ.

ಈರುಳ್ಳಿ ಬಾಂಬ್​ ಸಿಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಧ್ಯಾಹ್ನಾ 12.17ಕ್ಕೆ ಈ ದುರಂತ ಸಂಭವಿಸಿದೆ. ಕಿರಿದಾದ ರಸ್ತೆಯ ಪಕ್ಕ ನಿಂತಿದ್ದ ಜನರಿಗೂ ಸ್ಫೋಟದಿಂದ ಗಾಯಗಳಾಗಿವೆ.

ಬಾಂಬ್​ ಸ್ಫೋಟಗೊಂಡತೆ ಹೊಗೆ ಆವೃತವಾಗಿದೆ. ಸ್ಕೂಟರ್​ನ ಬಿಡಿ ಭಾಗಗಳು ಛಿದ್ರ ಛಿದ್ರವಾಗಿ ಬಿದ್ದಿದೆ. ಇಬ್ಬರು ಆ ಸ್ಥಳದಿಂದ ಓಡೋಡಿ ಬರುವ ದೃಶ್ಯ ಸಿಟಿಕ್ಯಾಮೆರಾದಲ್ಲಿ ಸೆರೆಯಾಗಿದೆ.

Leave a Comment

Leave a Reply

Your email address will not be published. Required fields are marked *

error: Content is protected !!