ಮತ್ತೊಮ್ಮೆ ಕ್ಯಾಪ್ಟನ್‌ಗಳ ವೇತನ ಹೆಚ್ಚಿಸಿದ ಸ್ಪೈಸ್‌ಜೆಟ್ – ಇನ್ಮುಂದೆ ಕ್ಯಾಪ್ಟನ್ ಗಳ ಸ್ಯಾಲರಿ ಎಷ್ಟು ಗೊತ್ತಾ?

ಮತ್ತೊಮ್ಮೆ ಕ್ಯಾಪ್ಟನ್‌ಗಳ ವೇತನ ಹೆಚ್ಚಿಸಿದ ಸ್ಪೈಸ್‌ಜೆಟ್ – ಇನ್ಮುಂದೆ ಕ್ಯಾಪ್ಟನ್ ಗಳ ಸ್ಯಾಲರಿ ಎಷ್ಟು ಗೊತ್ತಾ?

ನ್ಯೂಸ್ ಆ್ಯರೋ‌ : ಸ್ಪೈಸ್‌ಜೆಟ್ ಕ್ಯಾಪ್ಟನ್‌ಗಳಿಗೆ ಗುಡ್ ನ್ಯೂಸ್ ಹೊರ ಬಿದ್ದಿದೆ. ಮಂಗಳವಾರ ತನ್ನ ಕ್ಯಾಪ್ಟನ್‌ಗಳ ವೇತನವನ್ನು 75 ಗಂಟೆಗಳ ಹಾರಾಟಕ್ಕೆ ತಿಂಗಳಿಗೆ 7.5 ಲಕ್ಷ ರೂ.ಗೆ ಹೆಚ್ಚಿಸುವುದಾಗಿ ಕಂಪೆನಿ ಘೋಷಿಸಿದೆ.

ತನ್ನ 18ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಗುರುಗ್ರಾಮ ಮೂಲದ ವಿಮಾನಯಾನ ಸಂಸ್ಥೆಯು ಈ ಹೆಚ್ಚಳವು 2023ರ ಮೇ 16ರಿಂದ ಅನ್ವಯವಾಗಲಿದೆ ಎಂದು ಹೇಳಿದೆ. ಜೊತೆಗೆ ತರಬೇತುದಾರರ (ಡಿಇ, ಟಿಆರ್‌ಐ) ಮತ್ತು ಮೊದಲ ಹಂತದ ಅಧಿಕಾರಿಗಳ ವೇತನವನ್ನು ಸಹ ಹೆಚ್ಚಿಸುವ ಘೋಷಣೆ ಮಾಡಿದೆ.

ಈ ಹಿಂದೆ ನವೆಂಬರ್‌ನಲ್ಲಿ ವಿಮಾನಯಾನ ಸಂಸ್ಥೆಯು ತನ್ನ ಪೈಲಟ್‌ಗಳಿಗೆ ವೇತನವನ್ನು ಪರಿಷ್ಕರಿಸಿತ್ತು. ಇದರಲ್ಲಿ ಕ್ಯಾಪ್ಟನ್‌ಗಳ ವೇತನವನ್ನು 80 ಗಂಟೆಗಳ ಹಾರಾಟಕ್ಕಾಗಿ ತಿಂಗಳಿಗೆ 7 ಲಕ್ಷ ರೂ. ನಿಗದಿ ಪಡಿಸಿತ್ತು. ಇಸಿಎಲ್‌ಜಿಎಸ್ ಯೋಜನೆಯಿಂದ ಮತ್ತು ಅದರ ಆಂತರಿಕ ನಗದು ಸಂಚಯದಿಂದ ಪಡೆದ 50 ಮಿಲಿಯನ್ ಡಾಲರ್ ನಿಧಿಯಿಂದ ಸ್ಪೈಸ್‌ಜೆಟ್ ತನ್ನ ಗ್ರೌಂಡ್ ವಿಮಾನಗಳನ್ನು ಪುನರುಜ್ಜೀವನಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ಅಧ್ಯಕ್ಷ ಅಜಯ್ ಸಿಂಗ್ ತಿಳಿಸಿದ್ದರು.

ಸ್ಪೈಸ್‌ಜೆಟ್ ಭಾರತದೊಳಗಿನ ಮತ್ತು ಅಂತಾರಾಷ್ಟ್ರೀಯ 48 ಸ್ಥಳಗಳಿಗೆ ಸುಮಾರು 250 ದೈನಂದಿನ ವಿಮಾನಗಳ ಸೇವೆ ನೀಡುತ್ತದೆ. ಇದರ ಫ್ಲೀಟ್ ಬೋಯಿಂಗ್ 737 ಮ್ಯಾಕ್ಸ್, ಬೋಯಿಂಗ್ 700 ಮತ್ತು ಕ್ಯೂ400 ಸೇರಿದಂತೆ ಹಲವು ವಿಮಾನಗಳನ್ನು ಕಾರ್ಯ ನಿರ್ವಹಿಸುತ್ತಿವೆ.

Related post

ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಭರ್ಜರಿ ಪ್ರಚಾರ – ಅತೃಪ್ತ ಬಿಲ್ಲವರ ವೋಟ್ ಬ್ಯಾಂಕ್ ಸೆಳೆಯಲು ಚಿಂತನೆ

ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಭರ್ಜರಿ ಪ್ರಚಾರ…

ನ್ಯೂಸ್ ಆ್ಯರೋ : ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪರ ಚುನಾವಣಾ ಪ್ರಚಾರ ಆರಂಭಕ್ಕೂ‌ ಮೊದಲೇ ಬಿರುಸುಗೊಂಡಿದ್ದು, ಬಿಲ್ಲವ ಸಮಯದಾಯವನ್ನು ಒಗ್ಗೂಡಿಸುವ…
ದಿನ‌ ಭವಿಷ್ಯ 27-03-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 27-03-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಇಂದು ನಿಮ್ಮ ಹಣವನ್ನು ಅನೇಕ ವಿಷಯಗಳಿಗೆ ಖರ್ಚು ಮಾಡಬಹುದು, ನೀವು ಇಂದು ಉತ್ತಮ ಬಜೆಟ್ ಅನ್ನು ಯೋಜಿಸಬೇಕಾಗಿದೆ,…
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ – ದಕ್ಷಿಣ ಕನ್ನಡ ಜಿಲ್ಲಾದ್ಯಂತ ಈ‌ ದಿನಗಳಲ್ಲಿ ಮದ್ಯ ಮಾರಾಟ ಇಲ್ಲ..!

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ –…

ನ್ಯೂಸ್ ಆ್ಯರೋ ‌: ಈ ಬಾರಿಯ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸಂಬಂಧಿಸಿದಂತೆ ಏಪ್ರಿಲ್ 24ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಜಿಲ್ಲಾಡಳಿತ ನಿಷೇಧ ಹೇರಿ…

Leave a Reply

Your email address will not be published. Required fields are marked *