ಮತ್ತೊಮ್ಮೆ ಕ್ಯಾಪ್ಟನ್‌ಗಳ ವೇತನ ಹೆಚ್ಚಿಸಿದ ಸ್ಪೈಸ್‌ಜೆಟ್ – ಇನ್ಮುಂದೆ ಕ್ಯಾಪ್ಟನ್ ಗಳ ಸ್ಯಾಲರಿ ಎಷ್ಟು ಗೊತ್ತಾ?

ಮತ್ತೊಮ್ಮೆ ಕ್ಯಾಪ್ಟನ್‌ಗಳ ವೇತನ ಹೆಚ್ಚಿಸಿದ ಸ್ಪೈಸ್‌ಜೆಟ್ – ಇನ್ಮುಂದೆ ಕ್ಯಾಪ್ಟನ್ ಗಳ ಸ್ಯಾಲರಿ ಎಷ್ಟು ಗೊತ್ತಾ?

ನ್ಯೂಸ್ ಆ್ಯರೋ‌ : ಸ್ಪೈಸ್‌ಜೆಟ್ ಕ್ಯಾಪ್ಟನ್‌ಗಳಿಗೆ ಗುಡ್ ನ್ಯೂಸ್ ಹೊರ ಬಿದ್ದಿದೆ. ಮಂಗಳವಾರ ತನ್ನ ಕ್ಯಾಪ್ಟನ್‌ಗಳ ವೇತನವನ್ನು 75 ಗಂಟೆಗಳ ಹಾರಾಟಕ್ಕೆ ತಿಂಗಳಿಗೆ 7.5 ಲಕ್ಷ ರೂ.ಗೆ ಹೆಚ್ಚಿಸುವುದಾಗಿ ಕಂಪೆನಿ ಘೋಷಿಸಿದೆ.

ತನ್ನ 18ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಗುರುಗ್ರಾಮ ಮೂಲದ ವಿಮಾನಯಾನ ಸಂಸ್ಥೆಯು ಈ ಹೆಚ್ಚಳವು 2023ರ ಮೇ 16ರಿಂದ ಅನ್ವಯವಾಗಲಿದೆ ಎಂದು ಹೇಳಿದೆ. ಜೊತೆಗೆ ತರಬೇತುದಾರರ (ಡಿಇ, ಟಿಆರ್‌ಐ) ಮತ್ತು ಮೊದಲ ಹಂತದ ಅಧಿಕಾರಿಗಳ ವೇತನವನ್ನು ಸಹ ಹೆಚ್ಚಿಸುವ ಘೋಷಣೆ ಮಾಡಿದೆ.

ಈ ಹಿಂದೆ ನವೆಂಬರ್‌ನಲ್ಲಿ ವಿಮಾನಯಾನ ಸಂಸ್ಥೆಯು ತನ್ನ ಪೈಲಟ್‌ಗಳಿಗೆ ವೇತನವನ್ನು ಪರಿಷ್ಕರಿಸಿತ್ತು. ಇದರಲ್ಲಿ ಕ್ಯಾಪ್ಟನ್‌ಗಳ ವೇತನವನ್ನು 80 ಗಂಟೆಗಳ ಹಾರಾಟಕ್ಕಾಗಿ ತಿಂಗಳಿಗೆ 7 ಲಕ್ಷ ರೂ. ನಿಗದಿ ಪಡಿಸಿತ್ತು. ಇಸಿಎಲ್‌ಜಿಎಸ್ ಯೋಜನೆಯಿಂದ ಮತ್ತು ಅದರ ಆಂತರಿಕ ನಗದು ಸಂಚಯದಿಂದ ಪಡೆದ 50 ಮಿಲಿಯನ್ ಡಾಲರ್ ನಿಧಿಯಿಂದ ಸ್ಪೈಸ್‌ಜೆಟ್ ತನ್ನ ಗ್ರೌಂಡ್ ವಿಮಾನಗಳನ್ನು ಪುನರುಜ್ಜೀವನಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ಅಧ್ಯಕ್ಷ ಅಜಯ್ ಸಿಂಗ್ ತಿಳಿಸಿದ್ದರು.

ಸ್ಪೈಸ್‌ಜೆಟ್ ಭಾರತದೊಳಗಿನ ಮತ್ತು ಅಂತಾರಾಷ್ಟ್ರೀಯ 48 ಸ್ಥಳಗಳಿಗೆ ಸುಮಾರು 250 ದೈನಂದಿನ ವಿಮಾನಗಳ ಸೇವೆ ನೀಡುತ್ತದೆ. ಇದರ ಫ್ಲೀಟ್ ಬೋಯಿಂಗ್ 737 ಮ್ಯಾಕ್ಸ್, ಬೋಯಿಂಗ್ 700 ಮತ್ತು ಕ್ಯೂ400 ಸೇರಿದಂತೆ ಹಲವು ವಿಮಾನಗಳನ್ನು ಕಾರ್ಯ ನಿರ್ವಹಿಸುತ್ತಿವೆ.

Related post

ಪ್ರೇಯಸಿ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾಳಾ? – ಈ ತಪ್ಪುಗಳು ನಿಮ್ಮಲ್ಲೂ ಇರಬಹುದು ಗಮನಿಸಿ…

ಪ್ರೇಯಸಿ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾಳಾ? – ಈ ತಪ್ಪುಗಳು ನಿಮ್ಮಲ್ಲೂ ಇರಬಹುದು ಗಮನಿಸಿ…

ನ್ಯೂಸ್ ಆ್ಯರೋ‌ : ನಾವು ಪ್ರೀತಿಸುವ ಜೀವಗಳು ನಮ್ಮನ್ನು ದೂರ ಮಾಡಿದರೆ, ನಮ್ಮನ್ನು ನಿರ್ಲಕ್ಷ್ಯ ಮಾಡಿದರೆ ಅದರಿಂದಾಗುವ ನೋವು ಅಪಾರ. ಅದರಲ್ಲೂ ಪ್ರೇಯಸಿ ದೂರ ಮಾಡುತ್ತಿದ್ದರೆ ಅದನ್ನು ಸಹಿಸಲು…
ಮಲಗುವ ವಿಚಾರಕ್ಕೆ ಮಗಳಿಗೆ 25 ಬಾರಿ ಚೂರಿಯಿಂದ ಇರಿದು ಕೊಂದ ಅಪ್ಪ – ಸಿಸಿಟಿವಿಯಲ್ಲಿ ಘೋರ ಕೃತ್ಯ ಸೆರೆ, ವಿಡಿಯೋ ವೈರಲ್…!!

ಮಲಗುವ ವಿಚಾರಕ್ಕೆ ಮಗಳಿಗೆ 25 ಬಾರಿ ಚೂರಿಯಿಂದ ಇರಿದು ಕೊಂದ ಅಪ್ಪ…

ನ್ಯೂಸ್ ಆ್ಯರೋ : ಮಲಗುವ ವಿಚಾರಕ್ಕೆ ಉಂಟಾದ ಜಗಳದ ಹಿನ್ನೆಲೆಯಲ್ಲಿ ಸೂರತ್‌ನ ವ್ಯಕ್ತಿಯೊಬ್ಬ ತನ್ನ ಮಗಳಿಗೆ 25 ಬಾರಿ ಇರಿದು ಕೊಂದಿರುವ ಘಟನೆ ನಡೆದಿದೆ. ಇಡೀ ಕೃತ್ಯ ಸಿಸಿಟಿವಿಯಲ್ಲಿ…
ಕೊರಗಜ್ಜ ಮೂಲಸ್ಥಾನ ಕುತ್ತಾರಿಗೆ ಭೇಟಿ ನೀಡಿದ ರಚಿತಾ ರಾಮ್ – ಕೊರಗಜ್ಜನ ಕಾರಣಿಕದಿಂದಾಗಿಯೇ ಇಲ್ಲಿಗೆ ಬಂದೆ ಎಂದ ಗುಳಿಕೆನ್ನೆ ಬೆಡಗಿ..

ಕೊರಗಜ್ಜ ಮೂಲಸ್ಥಾನ ಕುತ್ತಾರಿಗೆ ಭೇಟಿ ನೀಡಿದ ರಚಿತಾ ರಾಮ್ – ಕೊರಗಜ್ಜನ…

ನ್ಯೂಸ್ ಆ್ಯರೋ : ಸ್ಯಾಂಡಲ್ ವುಡ್ ಬೆಡಗಿ, ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಅವರು ಬುಧವಾರ ಮಂಗಳೂರು ಸಮೀಪದ ಕುತ್ತಾರು ದೆಕ್ಕಾಡಿನ ಕೊರಗಜ್ಜ ದೈವದ ಆದಿ ಸ್ಥಳಕ್ಕೆ ಭೇಟಿ…

Leave a Reply

Your email address will not be published. Required fields are marked *