ಅದಾನಿ ಗ್ರೂಪ್ ನ 34,900 ಕೋಟಿಯ ಪ್ರಾಜೆಕ್ಟ್ ಸ್ಥಗಿತ – ಹಿಂಡನ್ ಬರ್ಗ್ ವರದಿಯ ಬಳಿಕ ನೆಲಕಚ್ಚುತ್ತಿದೆ ಅದಾನಿ ಗ್ರೂಪ್

ಅದಾನಿ ಗ್ರೂಪ್ ನ 34,900 ಕೋಟಿಯ ಪ್ರಾಜೆಕ್ಟ್ ಸ್ಥಗಿತ – ಹಿಂಡನ್ ಬರ್ಗ್ ವರದಿಯ ಬಳಿಕ ನೆಲಕಚ್ಚುತ್ತಿದೆ ಅದಾನಿ ಗ್ರೂಪ್

ನ್ಯೂಸ್ ಆ್ಯರೋ : ಅದಾನಿ ಗ್ರೂಪ್ ನ ಮಾಲಕ ಉದ್ಯಮಿ ಗೌತಮ್‌ ಅದಾನಿ ಅವರು ಗುಜರಾತಿನ ಮುಂದ್ರಾದಲ್ಲಿ ತಮ್ಮ 34,900 ಕೋಟಿ ರೂ.ಗಳ ಪೆಟ್ರೋಕೆಮಿಕಲ್ಸ್‌ ಯೋಜನೆಯನ್ನು ಸ್ಥಗಿತಗೊಳಿಸಿದ್ದಾರೆ.

ಈ ಯೋಜನೆಗಾಗಿ ಹಣ ಸಂಗ್ರಹಿಸುವ ಯೋಜನೆಗೂ ಅದು ತಿಲಾಂಜಲಿ ನೀಡಿದೆ. ಈ ಯೋಜನೆಗಾಗಿ ಎಸ್​ಬಿಐ ನೇತೃತ್ವದ ಏಳರಿಂದ ಎಂಟು ಬ್ಯಾಂಕ್​ಗಳ ಸಮೂಹದಿಂದ 14,000 ಕೋಟಿ ರೂಪಾಯಿ ಸಂಗ್ರಹಿಸಲು ಮಾತುಕತೆ ನಡೆಸಲಾಗುತ್ತಿತ್ತು. ಅದಾನಿ ಸಮೂಹದಿಂದ ನಡೆದಿದೆ ಎನ್ನಲಾದ ವಂಚನೆಗಳ ಬಗ್ಗೆ ಹಿಂಡನ್​ಬರ್ಗ್ ಪ್ರಕಟಿಸಿದ ವರದಿಯಿಂದ ಆದ ಹಿನ್ನಡೆಯಿಂದ ಚೇತರಿಸಿಕೊಳ್ಳಲು ಕಂಪನಿ ಪ್ರಯತ್ನಿಸುತ್ತಿರುವುದರ ನಡುವೆಯೇ ವಾರ್ಷಿಕ ದಶಲಕ್ಷ ಟನ್ ಹಸಿರು ಪಿವಿಸಿ ಯೋಜನೆಯ ಎಲ್ಲ ಚಟುವಟಿಕೆಗಳನ್ನು ತಕ್ಷಣ ದಿಂದಲೇ ನಿಲ್ಲಿಸುವಂತೆ ಸಂಬಂಧಪಟ್ಟ ಎಲ್ಲ ವರ್ತಕರು ಮತ್ತು ಸರಬರಾಜು ದಾರರಿಗೆ ಅದಾನಿ ಗ್ರೂಪ್ ಇಮೇಲ್ ರವಾನಿಸಿದೆ.

ಅಮೆರಿಕ ಮೂಲದ ಶಾರ್ಟ್‌ ಸೆಲ್ಲರ್‌ ಹಿಂಡೆನ್‌ ಬರ್ಗ್‌ ವರದಿಯ ಬಳಿಕ ಅದಾನಿ ಸಮೂಹ ತನ್ನ ಹೂಡಿಕೆಗಳನ್ನು ಎಚ್ಚರದಿಂದ ಮಾಡುತ್ತಿದೆ.
2019ರಲ್ಲಿ ಅದಾನಿ ಅವರು ತವರು ರಾಜ್ಯ ಗುಜರಾತಿನಲ್ಲಿ ಪೆಟ್ರೊಕೆಮಿಕಲ್ಸ್‌ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದಾಗಿ ಘೋಷಿಸಿದ್ದರು. ಎರಡು ವರ್ಷಗಳ ಬಳಿಕ ಮುಂದ್ರಾ ಪೆಟ್ರೊಕೆಮ್‌ ಮತ್ತು ಅದಾನಿ ಪೆಟ್ರೊಕೆಮಿಕಲ್ಸ್‌ , ತೈಲ ಸಂಸ್ಕರಣೆ ಘಟಕಗಳನ್ನು ಸ್ಥಾಪಿಸಲು ಮುಂದಾಗಿದ್ದವು.

ಮಾರುಕಟ್ಟೆಯಲ್ಲಿನ ಅನಿಶ್ಚಿತತೆ ಹಿನ್ನೆಲೆಯಲ್ಲಿ ಅದಾನಿ ಗ್ರೂಪ್‌ ಇದೀಗ ತನ್ನ ಗ್ರೀನ್ ಪಿವಿಸಿ ಪ್ರಾಜೆಕ್ಟ್‌ ಅನ್ನು ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ.‌ ಭಾರತದಲ್ಲಿ ಪಿವಿಸಿ ವಾರ್ಷಿಕ ಬೇಡಿಕೆ 3.50 ದಶಲಕ್ಷ ಟನ್ ಆಗಿರುವ ಹಿನ್ನೆಲೆಯಲ್ಲಿ ಮುಂದ್ರಾ ಪೆಟ್ರೋಕೆಮಿಕಲ್ ಯೋಜನೆಯನ್ನು ಅದಾನಿ ಗ್ರೂಪ್ ರೂಪಿಸಿತ್ತು. ಇತ್ತೀಚೆಗೆ ಡಿಬಿ ಪವರ್‌ ಅನ್ನು ಖರೀದಿಸುವ 7,017 ಕೋಟಿ ರೂ.ಗಳ ಡೀಲ್‌ ಅನ್ನೂ ಅದಾನಿ ಗ್ರೂಪ್‌ ಸ್ಥಗಿತಗೊಳಿಸಿತ್ತು.‌

Related post

ಪ್ರೇಯಸಿ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾಳಾ? – ಈ ತಪ್ಪುಗಳು ನಿಮ್ಮಲ್ಲೂ ಇರಬಹುದು ಗಮನಿಸಿ…

ಪ್ರೇಯಸಿ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾಳಾ? – ಈ ತಪ್ಪುಗಳು ನಿಮ್ಮಲ್ಲೂ ಇರಬಹುದು ಗಮನಿಸಿ…

ನ್ಯೂಸ್ ಆ್ಯರೋ‌ : ನಾವು ಪ್ರೀತಿಸುವ ಜೀವಗಳು ನಮ್ಮನ್ನು ದೂರ ಮಾಡಿದರೆ, ನಮ್ಮನ್ನು ನಿರ್ಲಕ್ಷ್ಯ ಮಾಡಿದರೆ ಅದರಿಂದಾಗುವ ನೋವು ಅಪಾರ. ಅದರಲ್ಲೂ ಪ್ರೇಯಸಿ ದೂರ ಮಾಡುತ್ತಿದ್ದರೆ ಅದನ್ನು ಸಹಿಸಲು…
ಮಲಗುವ ವಿಚಾರಕ್ಕೆ ಮಗಳಿಗೆ 25 ಬಾರಿ ಚೂರಿಯಿಂದ ಇರಿದು ಕೊಂದ ಅಪ್ಪ – ಸಿಸಿಟಿವಿಯಲ್ಲಿ ಘೋರ ಕೃತ್ಯ ಸೆರೆ, ವಿಡಿಯೋ ವೈರಲ್…!!

ಮಲಗುವ ವಿಚಾರಕ್ಕೆ ಮಗಳಿಗೆ 25 ಬಾರಿ ಚೂರಿಯಿಂದ ಇರಿದು ಕೊಂದ ಅಪ್ಪ…

ನ್ಯೂಸ್ ಆ್ಯರೋ : ಮಲಗುವ ವಿಚಾರಕ್ಕೆ ಉಂಟಾದ ಜಗಳದ ಹಿನ್ನೆಲೆಯಲ್ಲಿ ಸೂರತ್‌ನ ವ್ಯಕ್ತಿಯೊಬ್ಬ ತನ್ನ ಮಗಳಿಗೆ 25 ಬಾರಿ ಇರಿದು ಕೊಂದಿರುವ ಘಟನೆ ನಡೆದಿದೆ. ಇಡೀ ಕೃತ್ಯ ಸಿಸಿಟಿವಿಯಲ್ಲಿ…
ಕೊರಗಜ್ಜ ಮೂಲಸ್ಥಾನ ಕುತ್ತಾರಿಗೆ ಭೇಟಿ ನೀಡಿದ ರಚಿತಾ ರಾಮ್ – ಕೊರಗಜ್ಜನ ಕಾರಣಿಕದಿಂದಾಗಿಯೇ ಇಲ್ಲಿಗೆ ಬಂದೆ ಎಂದ ಗುಳಿಕೆನ್ನೆ ಬೆಡಗಿ..

ಕೊರಗಜ್ಜ ಮೂಲಸ್ಥಾನ ಕುತ್ತಾರಿಗೆ ಭೇಟಿ ನೀಡಿದ ರಚಿತಾ ರಾಮ್ – ಕೊರಗಜ್ಜನ…

ನ್ಯೂಸ್ ಆ್ಯರೋ : ಸ್ಯಾಂಡಲ್ ವುಡ್ ಬೆಡಗಿ, ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಅವರು ಬುಧವಾರ ಮಂಗಳೂರು ಸಮೀಪದ ಕುತ್ತಾರು ದೆಕ್ಕಾಡಿನ ಕೊರಗಜ್ಜ ದೈವದ ಆದಿ ಸ್ಥಳಕ್ಕೆ ಭೇಟಿ…

Leave a Reply

Your email address will not be published. Required fields are marked *