ಒಮ್ಮೆ ಈ ಸ್ಕೂಟರ್ ಚಾರ್ಜ್ ಮಾಡಿದ್ರೆ ಸಾಕು 85km ಓಡುತ್ತೆ..!! – ಬೌನ್ಸ್ ತಯಾರಿಸಿದೆ ಕೈಗೆಟುಕುವ ಬೆಲೆಯ ಅತ್ಯಾಧುನಿಕ ಎಲೆಕ್ಟ್ರಿಕ್ ಸ್ಕೂಟರ್..!!

ಒಮ್ಮೆ ಈ ಸ್ಕೂಟರ್ ಚಾರ್ಜ್ ಮಾಡಿದ್ರೆ ಸಾಕು 85km ಓಡುತ್ತೆ..!! – ಬೌನ್ಸ್ ತಯಾರಿಸಿದೆ ಕೈಗೆಟುಕುವ ಬೆಲೆಯ ಅತ್ಯಾಧುನಿಕ ಎಲೆಕ್ಟ್ರಿಕ್ ಸ್ಕೂಟರ್..!!

ನ್ಯೂಸ್ ಆ್ಯರೋ : ತೈಲೋತ್ಪನ್ನಗಳ ಬೆಲೆ ಏರಿಕೆಯಿಂದ ಜನರು ಎಲೆಕ್ಟ್ರಿಕಲ್ ವಾಹನಗಳತ್ತ ವಾಲುತ್ತಿದ್ದಾರೆ. ಅದೇ ಕಾರಣಕ್ಕೆ ದಿನಕ್ಕೊಂದು ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಎಲೆಕ್ಟ್ರಿಕಲ್ ಸ್ಕೂಟರ್ ಗಳು ವಾಹನೋದ್ಯಮವನ್ನು ಆಕ್ರಮಿಸಿಕೊಳ್ಳುತ್ತಿವೆ. ಇದೀಗ ಕೈಗೆಟಕುವ ಬೆಲೆಯಲ್ಲಿ ಬೌನ್ಸ್ ಅತ್ಯಾಧುನಿಕ ಶೈಲಿಯ ಎಲೆಕ್ಟ್ರಿಕಲ್ ಸ್ಕೂಟರ್ ಒಂದನ್ನ ತಯಾರಿಸಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 85km ಓಡುವ ಸಾಮರ್ಥ್ಯ ಈ ಸ್ಕೂಟರ್ ನಲ್ಲಿದೆ.

ಬೌನ್ಸ್ ಕಂಪೆನಿಯು ಬಜಾಜ್, ಓಲಾ, ಏಥರ್ ಮತ್ತು ಮತ್ತು ಟಿವಿಎಸ್ ಕಂಪೆನಿಗಳಿಗೆ ಪೈಪೋಟಿ ನೀಡುವ ಉದ್ದೇಶದಿಂದ ಇನ್ಫಿಟಿ ಇ1 ಹೆಸರಿನ ಕಡಿಮೆ ಬೆಲೆಯ ಎಲೆಕ್ಟ್ರಿಕಲ್ ಸ್ಕೂಟರ್ ಒಂದನ್ನು ಪರಿಚಯಿಸಿದೆ‌.

ಈ ಸ್ಕೂಟರ್ ವಿಶೇಷತೆಗಳೇನು?

ಈ ಇನ್ಪಿನಿಟಿ ಇ1 ಸ್ಕೂಟರ್ 1.9 ಕಿಲೋವ್ಯಾಟ್ ಅವರ್ ಸಾಮರ್ಥ್ಯದ ಐಯಾನ್ ಬ್ಯಾಟರಿಯನ್ನು‌ ಹೊಂದಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 85 km ಓಡುತ್ತದೆ. ಜೊತೆಗೆ‌ ಇದರಲ್ಲಿ1500 ವ್ಯಾಟ್ ಮೋಟಾರ್ ಲಭ್ಯವಿದೆ. ಇದರಿಂದ ನಾಲ್ಕು ಗಂಟೆಯಲ್ಲಿ 100% ಚಾರ್ಜ್ ಆಗುತ್ತದೆ. ಇದರಿಂದಾಗಿ ಒಂದು ಬ್ಯಾಟರಿ ಬಳಸುವಾಗಲೇ, ಇನ್ನೊಂದನ್ನು ಚಾರ್ಜ್ ಮಾಡಬಹುದು.

ಹೇಗಿದೆ ಈ ಸ್ಕೂಟರ್?

ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿರುವ ಈ ಸ್ಕೂಟರ್ ಸುಂದರವಾದ ರೆಟ್ರೋ ಲುಕ್ ಹೊಂದಿದೆ. ಇದರಲ್ಲಿ ಎರಡು ಪ್ರೊಜೆಕ್ಟರ್ ಸೆಟ್ಟಿಂಗ್ ಗಳು ಲಭ್ಯವಿದೆ. ಇದನ್ನು ಹೆಚ್ಚು ಹಾಗೂ ಕಡಿಮೆ ಕಿರಣದ ಆಯ್ಕೆಗಳಲ್ಲಿ ಬಳಸಬಹುದಾಗಿದೆ‌. ಇದರೊಂದಿಗೆ ಎಲ್.ಇ.ಡಿ ಟೈಲ್ ಲೈಟ್ ಇದರಲ್ಲಿದ್ದು, ಗ್ರಾಹಕರನ್ನು ಸೆಳೆಯುತ್ತಿದೆ. ಇದಿಷ್ಟೇ ಅಲ್ಲದೆ ಎಲ್ಸಿಡಿ ಡಿಸ್‌ಪ್ಲೇ, ಬ್ಲೂಟುತ್ ಕನೆಕ್ಟಿವಿಟಿ, ಜಿಪಿಎಸ್, ಡ್ರೈವರ್ ಅನ್ ಲಾಗ್ ಸಿಸ್ಟಮ್ ಕೂಡ ಇದರಲ್ಲಿ ಲಭ್ಯವಿದೆ.

ಈ ಸ್ಕೂಟರ್ ಬೆಲೆ ಎಷ್ಟು?

ಇಷ್ಟೊಂದು ವೈಶಿಷ್ಟ್ಯತೆ ಹಾಗೂ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿರು ಈ ಸ್ಕೂಟರ್ ಬೆಲೆ 55,443 ರಿಂದ 88,478ರ ವರೆಗೆ ಇದ್ದು, 65 km ಗಳಷ್ಟು ವೇಗ ಒಂದು ಗಂಟೆಗೆ ನೀಡುತ್ತದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *