ಡೆಡ್ಲಿ ವೆಪನ್ ಜೊತೆ ಸರ್ವ ಸನ್ನದ್ಧ ಯೋಧನಂತಿದೆ ಮೋದಿ ಬಳಸುವ ಕಾರ್ – ಈ ಕಾರಿನಲ್ಲಿದೆ ಊಹೆಗೂ ನಿಲುಕದ ರಕ್ಷಣಾ ವ್ಯವಸ್ಥೆ..!!

ಡೆಡ್ಲಿ ವೆಪನ್ ಜೊತೆ ಸರ್ವ ಸನ್ನದ್ಧ ಯೋಧನಂತಿದೆ ಮೋದಿ ಬಳಸುವ ಕಾರ್ – ಈ ಕಾರಿನಲ್ಲಿದೆ ಊಹೆಗೂ ನಿಲುಕದ ರಕ್ಷಣಾ ವ್ಯವಸ್ಥೆ..!!

ನ್ಯೂಸ್ ಆ್ಯರೋ‌ : ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆದರೂ ಪ್ರಧಾನ ಮಂತ್ರಿ ಮೋದಿ ಅಲ್ಲಿ ಹೋಗಿ ಪ್ರಚಾರ ನಡೆಸುತ್ತಾರೆ. ರೋಡ್ ಶೋ ಮೂಲಕ ಅಬಿಮಾನಿಗಳ ಮನ ಗೆಲ್ಲುತ್ತಾರೆ. ಹಾಗಾದರೆ ಮೋದಿ ಪ್ರಚಾರದಲ್ಲಿ ಬಳಸುವ ರೇಂಜ್ ರೋವರ್ ಕಾರಿನಲ್ಲಿ ಶತ್ರುಗಳ ದಾಳಿಯಿಂದ ಪಾರಾಗಲು ಯಾವೆಲ್ಲ ಆಧುನಿಕ ತಂತ್ರಜ್ಞಾನ ಇದೆ? ಇದರ ವಿಶೇಷತೆಗಳೇನು? ಎನ್ನುವುದನ್ನು ನೋಡೋಣ.

ಕಳೆದ ಬಾರಿ ಉತ್ತರ ಪ್ರದೇಶ ಚುನಾವಣಾ ಸಂದರ್ಭದಲ್ಲಿ ಮೋದಿ ಮಹೀಂದ್ರಾ ಥಾರ್ ಎಸ್.ಯು.ವಿ. ಬಳಸಿದ್ದರು. ಈ ಬಾರಿ ಕರ್ನಾಟಕ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಳಸಿದ್ದು ಟಾಟಾ ಒಡೆತನದ ಲ್ಯಾಂಡ್ ರೋವರ್ ತಯಾರಿಸಿದ ರೇಂಜ್ ರೋವರ್ ಕಾರನ್ನು..!

ವಿನ್ಯಾಸದಲ್ಲಿ ಇದು ಇತರ ಸಾಮಾನ್ಯ ಕಾರುಗಳಂತೆ ಕಾಣಿಸುತ್ತದೆಯಾದರೂ ರಕ್ಷಣಾ ದೃಷ್ಟಿಯಿಂದ ಮಾರ್ಪಾಡು ಮಾಡಲಾಗಿದೆ. ದಾಳಿ ನಡೆದರೆ ಕಾರಿನೊಳಗಿನ ರಹಸ್ಯ ಆಯುಧಗಳನ್ನು ಬಳಸಿ ಪ್ರತಿದಾಳಿ ನಡೆಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಕಾರು ಸಂಪೂರ್ಣ ಬುಲೆಟ್ ಪ್ರೂಫ್ ಆಗಿದೆ.

ಸುರಕ್ಷತಾ ವೈಶಿಷ್ಟ್ಯಗಳಿಗೆ ಧಕ್ಕೆಯಾಗದಂತೆ ಕಾರಿನ ಒಳಗಿನಿಂದ ಹೊರಗೆ ಸಂವಹನ ನಡೆಸುವಂತೆ ವಿನ್ಯಾಸಗೊಳಿಸಲಾಗಿದೆ. ಈ ಕಾರು 7.4 ಸೆಕೆಂಡ್ ಗಳಲ್ಲಿ ಗಂಟೆಗೆ 100 ಕಿ.ಮೀ. ವೇಗ ಪಡೆದುಕೊಳ್ಳಬಲ್ಲುದು. ಗಂಟೆಗೆ ಗರಿಷ್ಠ 193 ಕಿ.ಮೀ. ವೇಗದಲ್ಲಿ ಚಲಿಸುತ್ತದೆ.

ಐಇಡಿ ಬಾಂಬ್ ಸ್ಫೋಟಗೊಂಡರೂ ತಡೆದುಕೊಳ್ಳುವ ಶಕ್ತಿ ಈ ಕಾರಿಗಿದೆ. ಈ ಕಾರಿನ ಬೆಲೆ ಅಂದಾಜು 10 ಕೋಟಿ ರೂಪಾಯಿ. ಇದು ಎರಡು 10 ಇಂಚಿನ ಇನ್ಫೋಟೈನ್ ಮೆಂಟ್ ಸಿಸ್ಟಮ್, ಹೆಚ್ಚಿನ ರೆಸಲ್ಯೂಶನ್ ಟಚ್ ಸ್ಕ್ರೀನ್ ಒಳಗೊಂಡಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *