ಅಪ್ರಾಪ್ತೆಯನ್ನು 22 ಬಾರಿ ಚುಚ್ಚಿ, ಕಲ್ಲು ಎತ್ತಿಹಾಕಿ ಕೊಂದಾತ ಅಂದರ್ – ಕೊಲೆ ಆರೋಪಿ ಮಾಡಿದ ಆ ತಪ್ಪಿನಿಂದಲೇ ಆತ ಸಿಕ್ಕಿಬಿದ್ದ..!!

ಅಪ್ರಾಪ್ತೆಯನ್ನು 22 ಬಾರಿ ಚುಚ್ಚಿ, ಕಲ್ಲು ಎತ್ತಿಹಾಕಿ ಕೊಂದಾತ ಅಂದರ್ – ಕೊಲೆ ಆರೋಪಿ ಮಾಡಿದ ಆ ತಪ್ಪಿನಿಂದಲೇ ಆತ ಸಿಕ್ಕಿಬಿದ್ದ..!!

ನ್ಯೂಸ್ ಆ್ಯರೋ‌ : ಪ್ರೀತಿಸುತ್ತಿದ್ದ ಯುವತಿಯನ್ನು ಸಾರ್ವಜನಿಕವಾಗಿಯೇ ಭೀಕರವಾಗಿ ಕೊಂದ ಯುವಕ ಸಿನಿಮೀಯ ರೀತಿಯಲ್ಲಿ ಸಿಕ್ಕಿ ಬಿದ್ದಿರುವ ಘಟನೆ ದಿಲ್ಲಿಯಲ್ಲಿ ನಡೆದಿದೆ. ಅದಕ್ಕೆ ಕಾರಣ ಆತ ತಂದೆಗೆ ಮಾಡಿದ ಒಂದು ಕರೆ ಎನ್ನುವುದು ಕುತೂಹಲಕಾರಿ ಅಂಶ.

ಉತ್ತರ ಪ್ರದೇಶ ಮೂಲದ ಎಸಿ ಎಲೆಕ್ಟ್ರಿಷಿಯನ್‌ 22 ವರ್ಷದ ಸಾಹಿಲ್‌ ಎಂಬಾತ ಆರೋಪಿ. ಈತ 17 ವರ್ಷದ ಹಿಂದೂ ಯುವತಿಯನ್ನು ಪ್ರೀತಿಸುತ್ತಿದ್ದ. ದಿಲ್ಲಿಯಲ್ಲೇ ನೆಲೆಸಿದ್ದ ಸಾಹಿಲ್‌ ಹಾಗೂ ಯುವತಿ ನಡುವೆ ಕೆಲ ವಿಚಾರವಾಗಿ ಶನಿವಾರ ಜಗಳ ನಡೆದಿತ್ತು.

ಇದು ರವಿವಾರವೂ ಮುಂದುವರಿದು ಮಾತುಕತೆ ವಿಕೋಪಕ್ಕೆ ತಿರುಗಿ ಶಹಬಾದ್‌ ಡೈರಿ ಪ್ರದೇಶದಲ್ಲಿ ಸಾಹಿಲ್‌ 22 ಬಾರಿ ಆಕೆಗೆ ಇರಿದು, 5 ಬಾರಿ ಕಲ್ಲನ್ನು ತಲೆಯ ಮೇಲೆ ಎತ್ತಿ ಹಾಕಿ ಭೀಕರವಾಗಿ ಕೊಂದಿದ್ದ. ಇದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿತ್ತು.

ಕೊನೆಗೆ ಸಾಹಿಲ್‌ ಅಲ್ಲಿಂದ ತಲೆ ಮರೆಸಿಕೊಂಡು ಸ್ವಂತ ಊರಾದ ಭುಲೆಂದ್‌ ನಗರಕ್ಕೆ ತೆರಳಿದ್ದ. ಸಂಬಂಧಿಯ ಮನೆಯಲ್ಲಿ ಆಶ್ರಯ ಪಡೆಯಲು ಬಯಸಿ ತನ್ನ ತಂದೆಗೆ ಕರೆ ಮಾಡಿ ಘಟನೆ ಕುರಿತು ಮಾಹಿತಿ ನೀಡಿದ್ದ. ತನಿಖೆ ಚುರುಕುಗೊಳಿಸಿದ್ದ ದಿಲ್ಲಿ ಪೊಲೀಸರು ಆತನ ಮೊಬೈಲ್ ನೆಟ್‌ವರ್ಕ್‌ ಮೇಲೆ ನಿಗಾ ಇರಿಸಿದ್ದರು.

ಆತ ಕರೆ ಮಾಡಿದ್ದ ಟವರ್‌ ಪ್ರದೇಶದ ಮಾಹಿತಿ ಆಧರಿಸಿ ಭುಲೆಂದ್‌ ಶಹರ್‌ನಲ್ಲಿಯೇ ಬಂಧಿಸಲಾಗಿದೆ ಎಂದು ದಿಲ್ಲಿ ಪೊಲೀಸ್‌ ಹೆಚ್ಚುವರಿ ಆಯುಕ್ತರು ತಿಳಿಸಿದ್ದಾರೆ. ಸಂತ್ರಸ್ತೆಯೊಂದಿಗೆ ತನ್ನ ಸಂಬಂಧ ಮುರಿದು ಬಿದ್ದ ನಂತರ ಕೋಪಗೊಂಡಿದ್ದ ಆತ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಲವ್‌ ಜಿಹಾದ್‌ ಶಂಕೆ
ಬಿಜೆಪಿಯು ಕೊಲೆ ಪ್ರಕರಣವನ್ನು ಲವ್‌ ಜಿಹಾದ್‌ ಎಂದು ಹೇಳಿದ್ದು, ಸಮಗ್ರ ತನಿಖೆಗೆ ಆಗ್ರಹಿಸಿದೆ. ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಘಟನೆಯ ತನಿಖೆ ನಡೆಸಿ ತಪ್ಪಿತಸ್ಥಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದಾಗಿ ಹೇಳಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *