ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಕೊಟ್ಟ ಸಿಎಂ ಸಿದ್ದರಾಮಯ್ಯ – ಶೇ.4 ರಷ್ಟು ತುಟ್ಟಿ ಭತ್ಯೆ ಹೆಚ್ಚಳ, ಅಂಕಿತವಷ್ಟೇ ಬಾಕಿ…!!
- ಸರ್ಕಾರಿ ಸೇವೆಗಳು
- May 30, 2023
- No Comment
- 134
ನ್ಯೂಸ್ ಆ್ಯರೋ : ನೂತನ ರಾಜ್ಯ ಸರಕಾರ ತುಟ್ಟಿ ಭತ್ಯೆಯನ್ನು ಹೆಚ್ಚಳ ಮಾಡಿದೆ. ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಲ್ಲಿಸಿದ್ದ ಅರ್ಜಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ, ಈ ಮೂಲಕ ನೌಕರರಿಗೆ ಸಿಹಿ ಸುದ್ದಿ ಸಿಕ್ಕಿದೆ.
ಈ ಕುರಿತು ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸಲಾಗುವುದು. ಶೇ. 4ರಷ್ಟು ತುಟ್ಟಿ ಭತ್ಯೆ ಹೆಚ್ಚಳವಾಗಲಿದೆ. ಹೊಸ ಸರಕಾರದ ಈ ನಡೆ ಕೆಲವು ವರ್ಗದ ಜನರಿಗೆ ಸಹಾಯಕವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ವರ್ಷದ ಆರಂಭದಲ್ಲಿ ಸರಕಾರವು ಶೇ. 3ರಷ್ಟು ಭತ್ಯೆ ಹೆಚ್ಚಿಸಿತು. ಆ ನಂತರ ತುಟ್ಟಿ ಭತ್ಯೆಯನ್ನು ಶೇ. 38ಕ್ಕೆ ಹೆಚ್ಚಿಸಲಾಗಿತ್ತು. ಏರುತ್ತಿರುವ ಬೆಲೆಗಳನ್ನು ಸರಿಪಡಿಸಲು ಗ್ರಾಹಕ ಸೂಚ್ಯಂಕವನ್ನು ಆಧರಿಸಿ, ತುಟ್ಟಿ ಭತ್ಯೆ ಹೆಚ್ಚಳ ಮಾಡುವುದು ಅನಿವಾರ್ಯ, ನೌಕರರ ಸಂಬಳ ಹೆಚ್ಚಾದರೂ ಹಣದುಬ್ಬರದಿಂದಾಗಿ ಈ ಸಂಬಳ ಏರಿಕೆಯ ಪೂರ್ಣ ಲಾಭ ನೌಕರರಿಗೆ ಸಿಕ್ಕುವುದಿಲ್ಲ. ಈ ದೃಷ್ಟಿಯಿಂದ ನೌಕರರ ವೇತನ ಹಣ ಸರಿದೂಗಿಸಿರುವುದರಿಂದ ಭತ್ಯೆ ಹೆಚ್ಚಳ ಮಾಡಲಾಗುತ್ತದೆ.
ತುಟ್ಟಿ ಭತ್ಯೆ ಎಂದರೇನು?
ತುಟ್ಟಿಭತ್ಯೆ ಸರಕಾರಿ ನೌಕರರ ಮಾಸಿಕ ವೇತನದ ಮುಖ್ಯ ಹಂತ. ನೌಕರರ ಜೀವನ ವೆಚ್ಚದ ಹೆಚ್ಚಳವನ್ನು ಸರಿದೂಗಿಸಲು ನೀಡುವ ವೇತನ. ಇದನ್ನು ಪರಿಹಾರದ ರೀತಿಯಲ್ಲಿ ಪಾವತಿಸಲಾಗುತ್ತದೆ. ಕೇಂದ್ರ ಸರಕಾರಿ ನೌಕರರ ತುಟ್ಟಿಭತ್ಯೆ ಎರಡು ಬಾರಿ ಪರಿಷ್ಕರಿಸಲಾಗುತ್ತದೆ. ಮೊದಲನೆಯದನ್ನು ಜನವರಿಯಿಂದ ಜೂನ್ ವರೆಗೆ ಮತ್ತು ಜುಲೈನಿಂದ ಡಿಸೆಂಬರ್ ವರೆಗೆ ಬದಲಾವಣೆ ಮಾಡಲಾಗುತ್ತದೆ. ಕೇಂದ್ರ ಸರಕಾರದಂತೆಯೇ ರಾಜ್ಯ ಸರಕಾರವೂ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡುತ್ತದೆ.